Fri. Apr 11th, 2025

ಉಜಿರೆ: ಉಜಿರೆ ವರ್ತಕರ ಸಂಘದಿಂದ ಆಟೋ ಚಾಲಕ ರತ್ನಾಕರ ಗೌಡರ ಕಷ್ಟಕ್ಕೆ ಸಹಾಯ ಹಸ್ತ

ಉಜಿರೆ:(ಜು.9) ಉಜಿರೆಯಲ್ಲಿ ರಿಕ್ಷಾ ಚಲಿಸುತ್ತಿದ್ದಾಗ ರಿಕ್ಷಾದ ಮೇಲೆ ಮರ ಬಿದ್ದು ಗಾಯಗೊಂಡಿದ್ದ, ರತ್ನಾಕರ ಗೌಡರ ಕಷ್ಟಕ್ಕೆ ಉಜಿರೆ ವರ್ತಕ ಸಂಘ ಸ್ಪಂದಿಸಿದೆ.


ಉಜಿರೆ ವರ್ತಕರಿಂದ ಸಹಾಯ ಹಸ್ತ ಎಂಬ ಯೋಜನೆಯಡಿ ವರ್ತಕರೆಲ್ಲರೂ ಸೇರಿಕೊಂಡು ಸುಮಾರು 16000 ರೂಪಾಯಿ ಕಲೆಕ್ಷನ್ ಮಾಡಿ ರಿಕ್ಷಾ ಡ್ರೈವರ್ ರತ್ನಾಕರ ರಿಗೆ ನೀಡಲಾಯಿತು.

ಇದನ್ನೂ ಓದಿ: ದಾವಣಗೆರೆ: ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯನ ನಿಗೂಢ ಸಾವಿಗೆ ಈ ಒಂದು ವಿಷಯವೇ ಕಾರಣವಾಯ್ತಾ!!!https://uplustv.com/2024/07/09/ದಾವಣಗೆರೆ

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್ ,ಜೊತೆ ಕಾರ್ಯದರ್ಶಿ ಪ್ರಸಾದ್ ರಮ್ಯ ಫ್ಯಾನ್ಸಿ, ಉಪಾಧ್ಯಕ್ಷರುಗಳಾದ ಹುಕುಂರಾಮ್ ಪಟೇಲ್ ಶಾರದಾ ಶೋರೂಂ , ರವಿಕುಮಾರ್ ಬರೆಮೇಲು , ಪ್ರಭಾಕರ್ ಮಹಾವೀರ, ಪ್ರವೀಣ್ ಹಳ್ಳಿಮನೆ , ಸದಸ್ಯರಾದ ಜಯಂತ್ ನಮನ್ ಬೇಕರಿ, ರಿಚರ್ಡ್ ರಾಂಬೋ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು