Tue. Jun 3rd, 2025

ಬೆಳ್ತಂಗಡಿ:(ಜು.16) ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ ಜುಲೈ 15 ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆಯಿತು.

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ದಕ್ಷಿಣ ಕನ್ನಡ /ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನಾ ಸಭೆಯನ್ನು ಅನೇಕ ಕೋಳಿ ಸಾಕಾಣಿಕೆ ರೈತರ ಸಮ್ಮುಖದಲ್ಲಿ ಸಮಿತಿ ರಚಿಸಲಾಯಿತು.

ಇದನ್ನೂ ಓದಿ: https://uplustv.com/2024/07/16/subhash-dandekar-camlin-founder-

ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಮರೋಡಿ, ಉಪಾಧ್ಯಕ್ಷರಾಗಿ ಕೂಸಪ್ಪ ಶೆಟ್ಟಿ ಕೇದ್ದಳಿಕೆ, ಸಯ್ಯದ್ ವೇಣೂರು, ಪ್ರದೀಪ್ ಕುಮಾರ್,
ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಿ.ಕೆ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಈದು,

ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು, ಕಾನೂನು ಸಲಹೆಗಾರರಾಗಿ ಪ್ರಕಾಶ್ ವಕೀಲ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಸುರೇಂದ್ರ ಬೆದ್ರ, ರವೀಂದ್ರ ಪುತ್ತೂರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಾನಂದ ವೇಣೂರು, ಧರ್ಣಪ್ಪ ವಗ್ಗ, ರವಿ ಕಾಶಿಪಟ್ನ, ಸಂತೋಷ್ ಬೆದ್ರ, ಜಯರಾಮ್ ಶೆಟ್ಟಿ, ರಾಮಣ್ಣ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *