Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Bus stuck in mud : ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಬಸ್ – ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್

ಬೆಳ್ತಂಗಡಿ:(ಜು.19) ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲಾ ನದಿ , ತೊರೆಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಇದನ್ನೂ ಓದಿ: https://uplustv.com/2024/07/19/mogru-hill-collapsed-ವಿಪರೀತ-ಮಳೆಗೆ-ಗುಡ್ಡ-ಕುಸಿದು-ಮನೆ-ಸಂಪೂರ್ಣ-ಬಿರುಕು/

ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರಿಂದಾಗಿರುವಂತಹ ಕಾಮಗಾರಿ ವೈಫಲ್ಯದಿಂದಾಗಿ, ಅನೇಕ ಕಡೆ ಕೃತಕ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ.

ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ಚಾರ್ಮಾಡಿ ರಸ್ತೆಯ ನಿಡಿಗಲ್‌ ಸಮೀಪ ಬಸ್ಸೊಂದು ರಸ್ತೆಯ ಬದಿಯೇ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು , ಸುಮಾರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಂಪೂರ್ಣ ವಾಹನಗಳು ಎರಡು ಕಡೆ ಸಾಲುಗಟ್ಟಿ ನಿಂತದ್ದು ದೃಶ್ಯದಲ್ಲಿ ಕಂಡುಬರುತ್ತಿತ್ತು. ಎಲ್ಲರ ಹರಸಾಹಸದ ಬಳಿಕ ಸುಮಾರು 7 ಗಂಟೆಗೆ ಬಸ್ಸನ್ನು ತೆರವು ಮಾಡೋ ಕಾರ್ಯ ನಡೆಯಿತು.

ಮುಂಡಾಜೆ- ಸೋಮಂತ್ತಡ್ಕ ಫಾರೆಸ್ಟ್‌ ಕ್ವಾಟ್ರಸ್‌ ಬಳಿಯ ಪರಿಸರದಲ್ಲಿ ಮತ್ತು ಅಂಬಡ್ತ್ಯಾರ್‌ ಈ ಪ್ರದೇಶದಲ್ಲಿ ರಾಷ್ಟ್ರಿಯ ಹೆದ್ದಾರಿಯ ಕಾಮಗಾರಿಯಿಂದಾಗಿ ಸುಮಾರು 10 ಫೀಟ್‌ ನಷ್ಟು ಮಣ್ಣು ತುಂಬಿದ್ದಾರಿಂದಾಗಿ ,

ರಸ್ತೆಯಲ್ಲಿ ವಾಹನದ ಟಯರ್ ಗಳು ಸಿಲುಕಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಸಂಪೂರ್ಣವಾಗಿ ರಸ್ತೆ ಕೆಸರುಮಯವಾಗಿದೆ.

ದ್ವಿ-ಚಕ್ರ ವಾಹನ ಸವಾರರಿಗೆ ರಸ್ತೆ ಬಹಳ ಸವಾಲಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಎಲ್ಲಾ ವಾಹನಗಳಿಗೂ ತೀವ್ರ ಸಮಸ್ಯೆ ಉಂಟಾಗುತ್ತಿದೆ.

ಶಿರಾಡಿ ಘಾಟ್‌ ನಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Leave a Reply

Your email address will not be published. Required fields are marked *