Fri. Apr 18th, 2025

Mangalore: ನಮ್ಮ ತುಳುನಾಡ್ ಟ್ರಸ್ಟ್ (ರಿ.) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ

ಮಂಗಳೂರು :(ಜು.26) ನಗರದ ಕೆಪಿಟಿಯ ಕದ್ರಿ ಬಳಿ ಇರುವ ವೀರ ಯೋಧರ ಸ್ಮಾರಕ ಭವನದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. 

ಇಂದು ಭಾರತ ದೇಶದ ನಮ್ಮೆಲ್ಲರ ಉಳಿವಿಗಾಗಿ ಶತ್ರುಗಳೊಂದಿಗೆ ಹೋರಾಡಿ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿ ಕಾರ್ಗಿಲ್ ಗಡಿಯನ್ನು ಗೆದ್ದು ತಾಯಿ ಭಾರತ ಮಾತೆಯ ಕಿರೀಟವನ್ನು ಅಲಂಕರಿಸಿದಂತಹ ವೀರ ಯೋಧರಿಗೆ ಹೂಗುಚ್ಚ ಸಮರ್ಪಿಸಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. 

ಇದನ್ನೂ ಓದಿ: https://uplustv.com/2024/07/26/gulbarga-ವೈದ್ಯರ-ನಿರ್ಲಕ್ಷ್ಯಕ್ಕೆ-ಯುವಕನ-ಸಾವು-ವೈದ್ಯರ-ವಿರುದ್ಧ-ಗಂಭೀರ-ಆರೋಪ/

ಈ ಸಂದರ್ಭದಲ್ಲಿ ನಮ್ಮ ತುಳುನಾಡ್ ಟ್ರಸ್ಟ್(ರಿ) ಗೌರವಾಧ್ಯಕ್ಷ‌ರಾದ ಡಾ.ಹರಿಕೃಷ್ಣ ಪುನರೂರು, ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದಂತಹ ಜಿ .ವಿ .ಎಸ್  ಉಳ್ಳಾಲ್, ತುಳುನಾಡ ತುಡರ್ ಖ್ಯಾತಿಯ ಹಾಗೂ ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರದಂತಹ ಕೀರ್ತಿ ಕಾರ್ಕಳ,  ಟ್ರಸ್ಟ್‌ನ ಉಪಾಧ್ಯಕ್ಷ‌ರಾದ ದಯಾನಂದ ಶೆಟ್ಟಿ. ಉದ್ಯಮಿಗಳಾದ ವಿಜಯ್ ಪ್ರಭು,ಸಮಾಜ ಸೇವಕರಾದಂತಹ ಗಣೇಶ್ ಪೂಜಾರಿ,ಬಲ್ಲಾಲ್‌ಬಾಗ್ ಉದಯ್, ಅನಿಲ್, ವಿಘ್ನೆಶ್ .ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *