Tue. Apr 15th, 2025

Belal: ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್ ಮರ್ಡರ್‌ ಕೇಸ್‌ – ಆರೋಪಿಗಳ ಮನೆಯಿಂದ ಬೈಕ್, ಬಟ್ಟೆ , ಕತ್ತಿ ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ :(ಆ.29) ಬೆಳಾಲು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್ (83ವ) ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು

ಇದನ್ನೂ ಓದಿ: 🎀ಉಜಿರೆ: ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಶುಭಾರಂಭ

ಆ.28 ರಂದು ಪೊಲೀಸರು ಕಾಸರಗೋಡಿನ ಬದಿಯಡ್ಕ ಮನೆಗೆ ಕರೆದುಕೊಂಡು ಹೋಗಿ ಕೊಲೆಗೆ ಬಳಸಿದ ಬೈಕ್, ಕತ್ತಿ, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಸರಗೋಡಿನ ಬದಿಯಡ್ಕ ನಿವಾಸಿಯಾಗಿರುವ ಅಳಿಯ ರಾಘವೇಂದ್ರ ಕೆದಿಲಾಯ ಮತ್ತು ಮೊಮ್ಮಗ ಮುರಳಿಕೃಷ್ಣ ಅವರನ್ನು ಸ್ಥಳ ಮಹಜರು ನಡೆಸಲು ಆ.28 ರಂದು ಆರೋಪಿಗಳ

ಕಾಸರಗೋಡಿನ ಬದಿಯಡ್ಕ ಮನೆಗೆ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣೀರ ಹಾಗೂ ಸಿಬ್ಬಂದಿ ತಂಡದವರು ಹೋಗಿದ್ದು,

ಈ ವೇಳೆ ಕೊಲೆಗೆ ಬಳಸಿದ ಬೈಕ್, ಒಂದು ಕತ್ತಿ ಇಬ್ಬರು ಆರೋಪಿಗಳ ಬಟ್ಟೆಯನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *