ಬೆಳ್ತಂಗಡಿ:(ಸೆ.2) ಗಣೇಶೋತ್ಸವದ ಸಮಯದಲ್ಲಿ ಪರಿಸರ ಮಾಲಿನ್ಯದ ನೆಪವನ್ನು ಹೇಳಿ ಕೃತಕ ಟ್ಯಾಂಕ್ ಮತ್ತು ‘ಅರಸಿನ ಗಣಪತಿ’ ‘ಗೋಮಯ ಗಣಪತಿ ‘ಎಂಬಂತಹ ಧರ್ಮ ಬಾಹಿರ ಹಾಗೂ ಅಯೋಗ್ಯ ಸಂಕಲ್ಪನೆಯನ್ನು ನಡೆಸಿ

ಇದನ್ನೂ ಓದಿ: 🔶ಬೆಳ್ತಂಗಡಿ: ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ
ಗಣೇಶ ಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸುವ ಬಗ್ಗೆ ಹಾಗೂ ಅನಾಧಿಕಾಲದಿಂದ ನಡೆದು ಬಂದಂತಹ ರೂಢಿ ಪರಂಪರೆಗಳಿಗನುಸಾರ ನೈಸರ್ಗಿಕ ಜಲ ಕ್ಷೇತ್ರದಲ್ಲಿ


ವಿಸರ್ಜನೆಯನ್ನು ಮಾಡಲು ಆಕ್ಷೇಪಣೆಯನ್ನು ಎತ್ತಬಾರದು ಮತ್ತು ‘ಪ್ಲಾಸ್ಟರ್ ಆಫ್ ಫಾರೀಸ್’ ವಿಘಟನೆ ಯಾಗುವ ವಸ್ತುಗಳ ಬದಲು ಜೇಡಿ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ತಯಾರಿಸಲು ಆಡಳಿತವು ಮೂರ್ತಿ ಕಾರರಿಗೆ ಪ್ರೋತ್ಸಾಹ ನೀಡಬೇಕೆಂದು




ಬೆಳ್ತಂಗಡಿಯ ನಗರ ಪಂಚಾಯಿತಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಶ್ರೀ ರಾಜೇಶ್ ಕೆ ರವರಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶ್ರೀ ಉದಯಕುಮಾರ್ ಬಿ.ಕೆ, ವಿಶ್ವ ಹಿಂದೂ ಪರಿಷದ್ ನ ಶ್ರೀ ಮೋಹನ್ ಬೆಳ್ತಂಗಡಿ, ಧರ್ಮ ಪ್ರೇಮಿಗಳಾದ ಶ್ರೀ ದಿನೇಶ್ ನಡ, ಶ್ರೀ ಸಚಿನ್ ಕುಮಾರ್ ಬೆಳ್ತಂಗಡಿ, ಶ್ರೀ ಯೋಗೀಶ್ ಕೆಂಬರ್ಜೆ ಉಪಸ್ಥಿತರಿದ್ದರು.
