Sun. Apr 13th, 2025

Kadaba: ಕರ್ಕಶ ಶಬ್ದ – ಬೈಕ್ ವಶಕ್ಕೆ ಪಡೆದು ಸೈಲೆನ್ಸರ್ ಕಿತ್ತು ಕಳಿಸಿದ ಪೊಲೀಸರು!

ಕಡಬ :(ಸೆ.10) ಬೈಕ್ ಗೆ ಪ್ರತ್ಯೇಕ ಸೈಲೆನ್ಸರ್ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುತ್ತಾ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಬೈಕ್ ಸವಾರಿಗೆ ದಂಡ ವಿಧಿಸಿ ಸೈಲೆನ್ಸರ್ ನ್ನು ತೆಗೆಸಿದ ಘಟನೆ ನಡೆದಿದೆ.

ಇದನ್ನೂ ಓದಿ: 🟣ಕಲ್ಮಂಜ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಊರವರ ಸಂಯುಕ್ತ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಡಬ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಯುವಕರಿಬ್ಬರು ತನ್ನ ಬೈಕ್‌ ಗೆ ಪ್ರತ್ಯೇಕವಾಗಿ ಹೊಗೆ ಕೊಳವೆಯನ್ನು ಅಳವಡಿಸಿ ಶಬ್ದ ಮಾಲಿನ್ಯ ಮಾಡುತ್ತಿದ್ದರೆನ್ನಲಾಗಿದೆ.


ಬೈಕ್ ಸವಾರರಾದ ಪ್ರಶಾಂತ್ ಹಾಗೂ ಕುಮಾರ್ ಎಂಬವರ ಬೈಕನ್ನು ನಿಲ್ಲಿಸಿದ ಕಡಬ ಎಸ್.ಐ. ಅಭಿನಂದನ್ ಹಾಗೂ ಸಿಬ್ಬಂದಿಗಳು ಬೈಕನ್ನು ವಶಪಡಿಸಿಕೊಂಡು ದಂಡ ವಿಧಿಸಿರುವುದು ಅಲ್ಲದೆ ಸೈಲೆನ್ಸರ್ ನ್ನು ತೆಗೆಸಿ ಬೈಕನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *