Tue. Apr 8th, 2025

Bengaluru Muda case: ಇಂದು ಮುಡಾ ಕೇಸ್‌ ತೀರ್ಪು ಪ್ರಕಟಿಸಲಿದೆ ಹೈಕೋರ್ಟ್

ಬೆಂಗಳೂರು :(ಸೆ.24) ಮುಡಾ ಕೇಸ್‌ಗೆ ಅಂತಿಮ ಅನ್ನೋ ಅಂತ್ಯಕ್ಕೆ ಬಂದು ತಲುಪಿದೆ. ಸಿಎಂ ಸಿದ್ದರಾಮಯ್ಯ ಮಾಡಿದ್ರಾ, ಇಲ್ಲಾ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದು, ಸರಿನಾ? ತಪ್ಪಾ? ಯಾರ ವಾದಕ್ಕೆ ಹೈಕೋರ್ಟ್ ಮನ್ನಣೆ ನೀಡಲಿದೆ.

ಇದನ್ನೂ ಓದಿ: ⭕ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ಹೈಕೋರ್ಟ್ ತೀರ್ಪು ನೀಡಲಿದೆ.


ಇಡೀ ರಾಜ್ಯವೇ ಅಲರ್ಟ್ ಸ್ಥಿತಿಯಲ್ಲಿದೆ. ಕಾರಣ ಸಿಎಂ ಸಿದ್ದರಾಮಯ್ಯ ಭವಿಷ್ಯ. ಇಡೀ ರಾಷ್ಟ್ರ ರಾಜಕೀಯದ ಚಿತ್ರವೇ ಸಿಎಂ ಸಿದ್ದರಾಮಯ್ಯ ಭವಿಷ್ಯ ಏನಾಗಲಿದೆ ಅನ್ನೋದನ್ನ ಕಾದು ನೋಡ್ತಿದೆ.

ಮುಡಾ ಕೇಸ್ ಯಾರನ್ನ ಮೂಡೌಟ್ ಮಾಡ್ತಿದೆ ಅನ್ನೋ ಸಸ್ಪೆನ್ಸ್ ಥ್ರಿಲ್ಲರ್ ರಿವೀಲ್ ಆಗ್ತಿದೆ. ರಾಜಭವನ ತೀರ್ಮಾನ ಸರಿನಾ? ಸಿಎಂ ವಾದ ಸರಿನಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.


ಮೈಸೂರು ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಸಮರ, ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಪ್ರಾಸಿಕ್ಯೂಷನ್ ಭವಿಷ್ಯ ನಿರ್ಧಾರ ಆಗಲಿದೆ.


ಇಂದು ಸಿದ್ದು ಭವಿಷ್ಯ ಪ್ರಕಟ ಆಗ್ತಿದ್ದು, ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ತೀರ್ಪು ವ್ಯತಿರಿಕ್ತ ಬಂದಲ್ಲಿ 2 ಪಾರ್ಟಿಗಳ ನಿರ್ಧಾರ ಏನಾಗಲಿದೆ ಅನ್ನೋದು ಕುತೂಹಲ.

Leave a Reply

Your email address will not be published. Required fields are marked *