Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Sameer Acharya: ಬಿಗ್‌ ಬಾಸ್‌ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ– ಹೆತ್ತವರ ಜೊತೆ ಸೇರಿ ಪತ್ನಿ ಮೇಲೆ ಹಲ್ಲೆ.. !! ದಾಂಪತ್ಯ ಕಲಹದ ಅಸಲಿಯತ್ತೇನು ?

Sameer Acharya:(ಸೆ.30) ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಎಷ್ಟೇ ಕಿತ್ತಾಡಿಕೊಂಡರೂ ಕೊನೆಗೆ ಜಗಳ ಸರಿಯಾಗಿ ಗಂಡ – ಹೆಂಡತಿ ಮತ್ತೆ ಒಂದಾಗುತ್ತಾರೆ. ಹಾಗೆಯೇ ಬಿಗ್‌ ಬಾಸ್‌ ಖ್ಯಾತಿ ಮತ್ತು ಕನ್ನಡದ ಕೋಟ್ಯಾಧಿಪತಿ ಸಮೀರ್‌ ಆಚಾರ್ಯ ರ ದಾಂಪತ್ಯದಲ್ಲಿ ಕಲಹ ಉಂಟಾಗಿ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಇದನ್ನೂ ಓದಿ:🔴ಉಜಿರೆ: (ಅ.4 & 5 ) ಎಸ್‌.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಹಾಗೂ

ಶ್ರಾವಣಿ ಆಚಾರ್ಯ ಅವರು ಪತಿ ಸಮೀರ್ ಆಚಾರ್ಯ, ಮಾವ ರಾಘವೇಂದ್ರ ಹಾಗೂ ಅತ್ತೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಶ್ರಾವಣಿ ದೂರು ನೀಡಲು ಮುಂದಾಗುತ್ತಿದ್ದಂತೆ ಸಮೀರ್ ಆಚಾರ್ಯ ತಂದೆ-ತಾಯಿ ಕೂಡ ದೂರು ನೀಡಲು ಹೋಗಿದ್ದಾರೆ. ಸಮೀರ್ ಆಚಾರ್ಯ ಅವರ ಕೌಟುಂಬಿಕ ಕಲಹ ಹುಬ್ಬಳ್ಳಿ ಮಹಿಳಾ ಠಾಣೆಯಲ್ಲಿ ಕೆಲ ಕಾಲ ಮಾತಿನ ಜಟಾಪಟಿಯಾಗುವಂತೆ ಮಾಡಿದೆ.

ಅಷ್ಟಕ್ಕೂ ಆಗಿದ್ದೇನು?

ಸಮೀರ್ ಆಚಾರ್ಯ ಅವರ ಮೇಲೆ ಪತ್ನಿ ಶ್ರಾವಣಿಯವರು ಆರೋಪ ಮಾಡಿದ್ದರು. ಶ್ರಾವಣಿ ತನ್ನ ಮಗಳನ್ನು ಬೆದರಿಸಿದ ಕಾರಣಕ್ಕಾಗಿ ಜಗಳ ಶುರುವಾಗಿದೆ. ಮೊಮ್ಮಗಳಿಗೆ ಬೆದರಿಸಿದ್ದಕ್ಕೆ ಸಮೀರ್ ತಂದೆ ಶ್ರಾವಣಿಗೆ ಬೈದಿದ್ದರಂತೆ.

ಮಾತಿಗೆ ಮಾತು ಬೆಳೆದು ಮನೆಯಲ್ಲಿ ಜಗಳ ನಡೆದಿದೆ. ಸಮೀರ್ ಆಚಾರ್ಯ ಅವರು ತಂದೆ-ತಾಯಿ ಜೊತೆಗೂಡಿ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ಮಾಡುವಾಗ ಸಮೀರ್ ಪತ್ನಿ ಶ್ರಾವಣಿ ಅವರು ಇನ್ಸ್‌ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದರಂತೆ. ಆಗ ಶ್ರಾವಣಿ ಫೋನ್ ಒಡೆದು ಹಾಕಿ, ಕೈ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಈ ಜಗಳದಲ್ಲಿ ಸಮೀರ್ ಆಚಾರ್ಯ ತಂದೆಯ ತಲೆಗೂ ಗಾಯಗಳಾಗಿದೆ ಎನ್ನಲಾಗಿದೆ.

ಕೌನ್ಸಲಿಂಗ್ ಬಳಿಕ ಮತ್ತೆ ಒಂದಾದ ದಂಪತಿ!
ಕೊನೆಗೆ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಠಾಣೆಯ ಅಧಿಕಾರಿಗಳ ನಿಯಮಗಳಂತೆ ಮೊದಲಿಗೆ ಇಬ್ಬರಿಗೂ ಕೌನ್ಸಲಿಂಗ್ ಮಾಡಿದ್ದಾರೆ.

ಸಮೀರ್ ಆಚಾರ್ಯ ಮತ್ತು ದಂಪತಿ ಪೊಲೀಸ್ ಕೌನ್ಸಲಿಂಗ್ ಬಳಿಕ ಮತ್ತೆ ಒಂದಾಗಿದ್ದಾರೆ. ಯಾವುದೇ ದೂರು ದಾಖಲಿಸದೆ ಮುಂದೆ ಹೀಗೆ ಆಗುವುದಿಲ್ಲ ಅಂತ ಅರ್ಜಿ ಬರೆದುಕೊಟ್ಟು ವಾಪಸು ಮನೆಗೆ ತೆರಳಿದ್ದಾರೆ.

Leave a Reply

Your email address will not be published. Required fields are marked *