Sat. Apr 19th, 2025

Belthangady: ಅಪಘಾತದಲ್ಲಿ ಸಾವು – ನವೋದಯ ಗುಂಪಿನ ಸದಸ್ಯರಿಗೆ 1 ಲಕ್ಷ ರೂ. ವಿಮೆ ಚೆಕ್ ಹಸ್ತಾಂತರ

ಬೆಳ್ತಂಗಡಿ:(ಅ.28) ಬಂಗಾಡಿ ಸಹಕಾರಿ ಸಂಘದ ನಾವೂರು ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ಶಿವಪಾರ್ವತಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯೆ ಕಮಲಾ ಅವರು ವಾಹನ ಅಪಘಾತದಿಂದ ಮೃತಪಟ್ಟಿದ್ದು,

ಇದನ್ನೂ ಓದಿ: 🛑ಪತ್ನಿಯ ಒಡವೆ ಅಡವು ಇಡೋ ಮುಂಚೆ ಗಂಡಸರು ಯೋಚಿಸೋದು ಬೆಸ್ಟ್‌ !!

ಅವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚೈತನ್ಯ ವಿಮಾ ಯೋಜನೆಯಡಿಯಲ್ಲಿ ಮಂಜೂರಾದ ಒಂದು ಲಕ್ಷ ರೂ. ಮೊತ್ತದ ಚೆಕ್ ನ್ನು ಅವರ ಕುಟುಂಬಸ್ಥರಿಗೆ ಬಂಗಾಡಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಇವರು ಹಸ್ತಾಂತರಿಸಿದರು.


ಮೃತರ ನಾಮಿನಿ ಯಾಗಿದ್ದ ಅವರ ಪತಿ ನಾವೂರಿನ ಸಂಜೀವ ಮಲೆಕುಡಿಯ, ಹಾಗೂ ಅವರ ಪುತ್ರ ಪರಿಹಾರದ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ‌ಸಂಘದ ಸಿಇಒ ದಯಾನಂದ ಶೆಟ್ಟಿಗಾರ್,

ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ, ಸಿಬ್ಬಂದಿಗಳಾದ ರಮಾನಂದ ಮತ್ತು ಮಂಜುನಾಥ ಗೌಡ, ನವೋದಯ ಸಿಬ್ಬಂದಿಗಳಾದ ಸುಮಿತ್ರಾ ಬಂಗಾಡಿ ಮತ್ತು ಜಯರಾಮ ಬಂಗಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *