Mon. Apr 7th, 2025

Subramanya: ಹಿಂದು ಯುವತಿಗೆ ಮೆಸೇಜ್‌ – ತಂಡದಿಂದ ಹಲ್ಲೆ

ಸುಬ್ರಹ್ಮಣ್ಯ :(ನ.3) ಹಿಂದು ಯುವತಿಗೆ ಮೆಸೇಜ್‌ ಮಾಡುತ್ತಿದ್ದಾನೆಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಎಲಿಮಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ⭕ಬರ್ತ್‌ಡೇ ಮುನ್ನವೇ ಡೆತ್‌ ಡೇ ಮಾಡ್ಕೊಂಡ ನಿರ್ದೇಶಕ ಗುರುಪ್ರಸಾದ್‌!!


ಎಲಿಮಲೆಯಲ್ಲಿ ಯುವಕರ ತಂಡವೊಂದು ನಯಾಜ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದ್ದು, ಏಟು ತಿಂದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.


ಸ್ಥಳೀಯ ನಿವಾಸಿಯೋರ್ವ ಮಾತನಾಡಲಿಕ್ಕಿದೆಯೆಂದು ತನ್ನನ್ನು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹೊಡೆದಿರುವುದಾಗಿಯೂ, ಮಹಿಳೆಯರಿಗೆ ಮೆಸೇಜ್ ಮಾಡುವುದೇಕೆಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯುವಕ ದೂರು ನೀಡಿದ್ದಾನೆ.

Leave a Reply

Your email address will not be published. Required fields are marked *