Fri. Apr 11th, 2025

Belthangady: ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್‌ – ಸಮರ್ಥ್ ಕೆ.ಎಸ್ ಮತ್ತು ಸಮೀಕ್ಷಾ ಎಸ್ ಅವರಿಗೆ ಪ್ರಥಮ ಸ್ಥಾನ

ಬೆಳ್ತಂಗಡಿ:(ನ.25) ಇಂಪಾಕ್ಟ್ ಆರ್ಟ್ ಏಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇವರು ಪುತ್ತೂರು ಎಪಿಎಂಸಿ ರೈತ ಭವನದಲ್ಲಿ ಆಯೋಜಿಸಿದ್ದ ಮುಕ್ತ

ಇದನ್ನೂ ಓದಿ: 🟠ಬೆಳ್ತಂಗಡಿ: ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್


ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಮುಂಡಾಜೆಯ ಸಮರ್ಥ್ ಕೆ.ಎಸ್ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಂತೆಯೇ ಅವರ ಸಹೋದರಿ ಸಮೀಕ್ಷಾ ಎಸ್ ಅವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.

ಮುಂಡಾಜೆ ಕ್ರೈಸ್ಟ್ ಅಕಾಡಮಿ ಇಲ್ಲಿನ ವಿದ್ಯಾರ್ಥಿಗಳಾಗಿರುವ ಇವರು ಭಾರತೀಯ ಸೇನೆಯ ಯೋಧ ಶಶಿಧರ ಕೆ.ಎಸ್ ಮತ್ತು ಭವ್ಯಾ ದಂಪತಿಯ ಪುತ್ರರಾಗಿದ್ದು, ಇವರಿಗೆ ಕರಾಟೆ ಶಿಕ್ಷಕ ಜಿತೇಶ್ ಬಿ.ಎಸ್ ಇವರು ತರಬೇತಿ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *