Tue. Apr 8th, 2025

Katapady: ಎಸ್‌.ವಿ.ಕೆ./ಎಸ್‌.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸಭೆ

ಕಟಪಾಡಿ:(ಡಿ.27) ಕಟಪಾಡಿ ಎಸ್‌.ವಿ.ಕೆ./ಎಸ್‌.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಇದನ್ನೂ ಓದಿ: ಕನ್ಯಾಡಿ: ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

ಶಾಲಾ ಸಂಚಾಲಕರಾದ ಶ್ರೀ ಸತ್ಯೇಂದ್ರ ಪೈ ಅವರು ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಭಾರತದ ರಿಸರ್ವ್ ಬ್ಯಾಂಕ್‌ ಗವರ್ನರ್‌ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ದುಡಿದು, ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ಸ್ಪಷ್ಟತೆ ಹೊಂದಿದ್ದ ಮಹಾನ್ ನಾಯಕನಾಗಿದ್ದರು. ಆರ್ಥಿಕ ಮಂತ್ರಿಗಳಾಗಿ ಜಗತ್ತಿನ ಗಮನವನ್ನು ಸೆಳೆದ ಇವರು, ದೇಶದ ಪ್ರಧಾನಮಂತ್ರಿಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸಿ, ಕೀರ್ತಿಶೇಷರಾಗಿದ್ದಾರೆ ಎಂದು ಪ್ರಶಂಸೆ ಸಲ್ಲಿಸಿದರು.

ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಅವರ ಸ್ಮರಣಾರ್ಥವಾಗಿ ಶಾಲಾ ವಾರ್ಷಿಕೋತ್ಸವವನ್ನು ಮುಂದೂಡಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಬಿ. ಚಂದ್ರಕಾಂತ್‌ ಪೈ ಮತ್ತು ಶ್ರೀನಿವಾಸ ಕಿಣಿ, ಎಸ್‌.ವಿ.ಎಸ್. ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಸುರೇಶ್‌, ಶಾಲಾ ಮುಖ್ಯೋಪಾಧ್ಯಾಯರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಭಾಗವಹಿಸಿದರು.

Leave a Reply

Your email address will not be published. Required fields are marked *