Tue. Apr 8th, 2025

Udupi: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಕಳ್ಳನ ಎಂಟ್ರಿ – ಕರಿಮಣಿ ಸರ ಕದ್ದು ಪರಾರಿ!!

ಉಡುಪಿ:(ಡಿ.28) ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದಿದ್ದ ಕಳ್ಳನೋರ್ವ ಚಿನ್ನದ ಸರವನ್ನು ಕದ್ದು ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಇದನ್ನೂ ಓದಿ: ಕುಣಿಗಲ್: ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್


ಕಾರ್ಕಳ ನಗರದ ರಥಬೀದಿಯಲ್ಲಿರುವ ಎಸ್.ಜಿ. ಅರ್ಕೆಡ್ ಬಳಿ ಈ ಘಟನೆ ನಡೆದಿದ್ದು, ಮೂವತ್ತು ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಕಳ್ಳ ಓಡಿ ಹೋಗಿದ್ದಾನೆ.


ಚಿನ್ನದ ಸರ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದ ಕಳ್ಳನಿಗೆ ಮಹಿಳಾ ಸಿಬ್ಬಂದಿ ಚಿನ್ನದ ಸರಗಳನ್ನು ತೋರಿಸುತ್ತಿದ್ದರು. ಈ ವೇಳೆ ಇದೇ ವೇಳೆ ಕೈಗೆ ಸಿಕ್ಕಿದ ಸರವನ್ನು ಎಳೆದು ಕಳ್ಳ ಪರಾರಿಯಾಗಿದ್ದಾನೆ.


ಎಲ್ಲರೂ ನೋಡುತ್ತಿದ್ದಂತೆಯೇ ಕಳ್ಳ ಓಡಿ ಹೋಗಿದ್ದು, ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Leave a Reply

Your email address will not be published. Required fields are marked *