ಉಡುಪಿ:(ಫೆ.12) ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಕಾರಣ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತಿರುವ ಘಟನೆಯೊಂದು ನಡೆದಿದೆ.

ತಡೆರಹಿತ ಬಸ್ಸೊಂದು ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯ ಕಡೆಗೆ ಹೋಗುತ್ತಿತ್ತು. ಆಗ ಬಸ್ನ ಚಾಲಕರಾದ ಶಂಭು ಎಂಬುವವರಿಗೆ ದಿಢೀರ್ ಅನಾರೋಗ್ಯ ಕಂಡಿದೆ.


ಘಟನೆಯ ನಂತರ ಚಾಲಕ ಶಂಭು ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
