Wed. Feb 26th, 2025

Uppinangadi: ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ:(ಫೆ.25) ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ದಿನದ ಪ್ರಯುಕ್ತ ದಿನಾಂಕ 24/2/2025 ರಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದಿಂದ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ ಜರುಗಿತು.

ಇದನ್ನೂ ಓದಿ: ಮಂಗಳೂರು: ಕೋಟ್ಯಂತರ ರೂ. ವಂಚಿಸಿದ್ದ ಸೈಬರ್ ವಂಚಕರ ಜತೆಗೆ ಮಂಗಳೂರು ಪೊಲೀಸರ ಪ್ರವಾಸ, ಸೆಲ್ಫಿ!!

ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ (ಕುಮುದಾಕ್ಷಿ ) ಭಾಸ್ಕರ ಬಾರ್ಯ (ಹನುಮಂತ )ಶ್ರೀಧರ ಎಸ್. ಪಿ ಸುರತ್ಕಲ್ (ಕರ್ಣ )ಜಿನೇಂದ್ರ ಜೈನ್ ಬಳ್ಳಮಂಜ(ಗಾರ್ಗ್ಯ ಮುನಿ ಮತ್ತು ಕುಂಜರ )ಶ್ರೀಮತಿ ಗೀತಾ(ಚಂದ್ರಸೇನ1,) ಸತೀಶ್ ಶಿರ್ಲಾಲು(ದ್ರೋಣ )ಗುಡ್ಡಪ್ಪ ಬಲ್ಯ(ಅರ್ಜುನ )ಜಯರಾಮ ಬಲ್ಯ(ಭೀಮ)ರವೀಂದ್ರ ದರ್ಬೆ(ಕೌರವ )
ಶ್ರೀಮತಿ ಶ್ರುತಿ ವಿಸ್ಮಿತ್ (ಭೀಷನಿ) ಶ್ರೀಮತಿ ಪೂರ್ಣಿಮಾ ರಾವ್ ಬೆಳ್ತಂಗಡಿ (ಧರ್ಮರಾಯ ಮತ್ತು ವಿಪ್ರರು )ಪ್ರದೀಪ ಚಾರ(ಚಂದ್ರಸೇನ 2 ಮತ್ತು ನಾರದ )ದಿವಾಕರ ಆಚಾರ್ಯ ಗೇರುಕಟ್ಟೆ (ವಿಜಯಶೀಲೆ ಮತ್ತು ಶ್ರೀಕೃಷ್ಣ )ಭಾಗವಹಿಸಿದ್ದರು.

ಭಾಗವತರಾಗಿ ಪದ್ಮನಾಭ ಕುಲಾಲ್‌ ಸುರೇಶ ರಾವ್. ಬಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ,ನಿತೀಶ್ ಕುಮಾರ್ ವೈ
ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ,ಪ್ರಚೇತ ಆಳ್ವ ಬಾರ್ಯ,
ಗುರುಮೂರ್ತಿ ಅಮ್ಮಣ್ಣಾಯ,ಕಾರ್ತಿಕ್ ಬಾರ್ಯ ಭಾಗವಹಿಸಿದ್ದರು.

ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 66 ನೇಯ ತಾಳಮದ್ದಳೆಯಾಗಿದ್ದು ಶ್ರೀದೇವಳದ ವತಿಯಿಂದ ಪ್ರಾಯೋಜಿಸಲಾಗಿತ್ತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.ದೇವಾಲಯದ ಮ್ಯಾನೇಜರ್ ವೆಂಕಟೇಶ್ ಭಟ್, ಗಂಗಾಧರ ಟೈಲರ್, ಕಚೇರಿ ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ ಗೌಡ ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಶ್ರೀಪತಿ ಭಟ್ ವಂದಿಸಿದರು. 20ಕ್ಕಿಂತಲೂ ಹೆಚ್ಚು ಕಲಾವಿದರು ಭಾಗವಹಿಸಿ ನಾಲ್ಕುವರೆ ಗಂಟೆಗಿಂತಲೂ ಹೆಚ್ಚಿನ ಅವಧಿಯಲ್ಲಿ ಜರಗಿದ ತಾಳಮದ್ದಳೆಯು ಕಲಾವಿದರು ಮತ್ತು ಪ್ರೇಕ್ಷಕರ ಮನರಂಜಿಸಿತು.

1933ರಲ್ಲಿ ಚರ್ವಕಾಡು ಶಂಭು ಜೋಯಿಸರು ರಚಿಸಿದ ಈ ಪ್ರಸಂಗದ ಅಪರೂಪದ ಪ್ರದರ್ಶನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಶ್ರೀ ಮಹಾಭಾರತ ಸರಣಿಯಲ್ಲಿ 20ಕ್ಕಿಂತ ಹೆಚ್ಚು ಕಲಾವಿದರು ಭಾಗವಹಿಸಿದ ಮೊದಲ ತಾಳಮದ್ದಳೆ ಎಂಬ ಕೀರ್ತಿಗೂ ಪಾತ್ರವಾಯಿತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು