Wed. Feb 26th, 2025

Mangaluru: ಮಂಗಳೂರಿನಲ್ಲಿ ಹೆಚ್ಚಾದ ನಕಲಿ ತೃತೀಯ ಲಿಂಗಿಗಳ ಹಾವಳಿ – ತೃತೀಯ ಲಿಂಗಿಗಳಂತೆ ವೇಷ ಧರಿಸಿ ವೇಶ್ಯಾವಾಟಿಕೆ ಮತ್ತು ಭಿಕ್ಷಾಟನೆ!!

ಮಂಗಳೂರು:(ಫೆ.26) ಮಂಗಳೂರಿನಲ್ಲಿ ನಕಲಿ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದೆ. ಹೊರ ರಾಜ್ಯದ ಮಹಿಳೆಯರು ಮಂಗಳಮುಖಿಯರಂತೆ ವೇಷ ಧರಿಸಿ ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆ ಮಾಡುತ್ತಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ‌

ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಜಿಲ್ಲಾ ಪಂಚಾಯತ್‌ ಸಿಇಒ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಇಒ ಅವರು, ಜಿಲ್ಲೆಯಲ್ಲಿ ನಕಲಿ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ತೃತೀಯ ಲಿಂಗಿಗಳ ಗುರುತು ಚೀಟಿಗಳಿಗೆ ನೋಂದಾಯಿಸಲು ವ್ಯಕ್ತಿಗಳ ಪರಿಶೀಲಿಸಿ ಗುರುತು ಚೀಟಿ ನೀಡಬೇಕು. ಬ್ಯಾಂಕ್‌ ಪಾಸ್‌ ಬುಕ್‌ , ಪಡಿತರ ಚೀಟಿ, ವೋಟರ್‌ ಐಡಿ,

ಆಧಾರ್‌ ಕಾರ್ಡ್‌, ವಿಮೆ ಯೋಜನೆಗಳನ್ನು ಒದಗಿಸಬೇಕು. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿವೇಶನ ನೀಡಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು