ಬೆಳ್ತಂಗಡಿ :(ಮಾ.5) ಗುರುವಾಯನಕೆರೆಯ ಶಿವಾಜಿನಗರ ಶ್ರೀ ವೇದವ್ಯಾಸ ಶಿಶು ಮಂದಿರಕ್ಕೆ ಬೆಳ್ತಂಗಡಿ ರೋಟರಿ ಸಂಸ್ಥೆಯ ವತಿಯಿಂದ ಧನ ಸಹಾಯವನ್ನು ಮಾಡಲಾಯಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ನಗರಗಳಲ್ಲಿ ಬಿ ಖಾತಾ ಆಂದೋಲನ – ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ
50ಕ್ಕೂ ಹೆಚ್ಚು ಮಕ್ಕಳು ಪಠ್ಯೇತರ ಶಿಕ್ಷಣವನ್ನು ಪಡೆಯುತ್ತಿರುವ ಈ ಶಿಶು ಮಂದಿರಕ್ಕೆ ಬೆಳ್ತಂಗಡಿ ರೋಟರಿ ತಂಡ ಭೇಟಿ ನೀಡಿ ಪುಟಾಣಿಗಳಿಗೆ ಸಿಹಿ ಹಂಚುವ ಮೂಲಕ ಯೋಗಕ್ಷೇಮ ವಿಚಾರಿಸಿದರು.



ಈ ಸಂದರ್ಭದಲ್ಲಿ ಮಂದಿರದ ಆಡಳಿತ ವ್ಯವಸ್ಥೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದ್ದ ಬೆನ್ನಲ್ಲಿ, ರೋಟರಿ ಕ್ಲಬ್ ವತಿಯಿಂದ ಮಂದಿರದ ಸಿಬ್ಬಂದಿ ವರ್ಗದವರಿಗೆ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ 15 ಸಾವಿರದ ಚೆಕ್ ಹಸ್ತಾಂತರಿಸಿದರು.

ಈ ವೇಳೆ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವೊ, ರೊಟೇರಿಯನ್ ತ್ರಿವಿಕ್ರಮ ಹೆಬ್ಬಾರ್ ಹಾಗೂ ಮಂದಿರದ ಮಾತಾಜಿ ಅಶ್ವಿನಿ ಮತ್ತು ಜಯಶ್ರೀ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
