Mon. Mar 10th, 2025

Belthangady: ಬೆಳ್ತಂಗಡಿಯಲ್ಲಿ ಎಸ್. ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರ ಸ್ಥಳಾಂತರಗೊಂಡು ಪುನರಾರಂಭ

ಬೆಳ್ತಂಗಡಿ:(ಮಾ.7) ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಎದುರಿನ ನೂತನ್ ಡ್ರೆಸ್ಸಸ್ ನ ಮೊದಲ ಮಹಡಿ ಯಲ್ಲಿ ಶ್ರೀ ದಯಾನಂದ ನಾಯಕ್ ಇವರ ಮಾಲಕತ್ವದ ಎಸ್. ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರವು ಮಾ.06 ರಂದು ಪುನರಾರಂಭಗೊಂಡಿದೆ.

ಪುರೋಹಿತರು ಹಾಗೂ ಜ್ಯೋತಿಷಿಗಳಾದ ಶ್ರೀ ಪ್ರಭಾಕರ ಭಟ್ ಇಡ್ಯಾ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಕಳೆದ 27 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಈ ಸಂಸ್ಥೆಯು ಇದೀಗ ಸ್ಥಳಾಂತರಗೊಂಡು ಮತ್ತೊಮ್ಮೆ ಯಶಸ್ಸಿನ ದಾರಿಯಲ್ಲಿ ಸಾಗಲಿ ಎಂದು ಶುಭಾಶೀರ್ವಾದ ಮಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರು ಶುಭವನ್ನು ಹಾರೈಸುತ್ತಾ ಸಹೃದಯತೆ, ಪ್ರೀತಿ, ಸೇವೆ ಮತ್ತು ವಿಶ್ವಾಸ ಬೆಲೆ ಕಟ್ಟಲಾಗದ ಸಂಗತಿಗಳು, ಈ ನಾಲ್ಕು ಸಂಗತಿಗಳನ್ನು ಮುಂದಿಟ್ಟುಕೊಂಡು ಮಾಡಿದ ಸೇವೆ ಜನತಾ ಸೇವೆಯಲ್ಲಿ ಜನಾರ್ಧನನನ್ನು ಕಾಣುವುದು ಸತ್ಯವಾದ ಸಂಗತಿಯಾಗಿದೆ,

ಎಸ್ ಎನ್ ಕಂಪ್ಯೂಟರ್ಸ್ ಎಲ್ಲರ ಸೇವೆಗೆ ಅನನ್ಯವಾಗಿ ಲಭ್ಯವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾರದಾ ದಯಾನಂದ್ ನಾಯಕ್, ನಿಧೀಶ್ ನಾಯಕ್, ಸದಾನಂದ ಪ್ರಭು ಹೀರ್ತೊಟ್ಟು, ಸುಧಾಕರ ಪ್ರಭು ಪರ್ಮರೋಡಿ ದಂಪತಿಗಳು, ಸುಧಾಕರ ಪ್ರಭು ಇಡ್ಯಾ, ಕಟ್ಟಡದ ಮಾಲೀಕರಾದ ಶ್ರೀಮತಿ ಸೆಲಿನ್ ನೋರೋನ್ಹ , ಶ್ರೀಮತಿ ನ್ಯಾನ್ಸಿ ಡಿ’ಸೋಜ, ಶ್ರೀಮತಿ ಭಾರತಿ ಜೈನ್, ಅಂಬ್ರೊಸ್ ಡಿ’ಸೋಜ ದಂಪತಿಗಳು, ಬಾಲಕೃಷ್ಣ ಶೆಣೈ, ಯಶವಂತ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *