Wed. Mar 12th, 2025

Puttur: ಸಿಇಎನ್ ಅಧಿಕಾರಿಗಳ ಕಾರ್ಯಾಚರಣೆ – ಇಬ್ಬರ ಬಂಧನ

ಪುತ್ತೂರು:(ಮಾ.11) ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈರ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 🛑ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ

ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.11-2025, U/S 66(C) 66(D) IT Act and 308,318(4), 319(2)BNS ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಇವರ ನಿರ್ದೇಶನದಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಮಂಜುನಾಥ ಆರ್.ಜಿ.ರವರ ನೇತೃತ್ವದಲ್ಲಿ

ಎಸ್‌ಐ ಯೂನುಸ್ ಆರ್ ಗಡ್ಡೆಕಾರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ನಾಗಪ್ಪ ಬೆನಕಟ್ಟಿ, ಇವರ ತಂಡ ಅನೂಪ್ ವಿಜಯ ಕಾರೇಕರ (42 ವರ್ಷ) ತಂದೆ: ವಿಜಯ, ವಾಸ: #499 K ರಾಮದೇವ್ ಗಲ್ಲಿ,

ವಡಗಾಂವ್, ಬೆಳಗಾವಿ ಜಿಲ್ಲೆ-590005 ಮತ್ತು ಅವಿನಾಶ್ ವಿಠಲ ಸುತಾರ (28 ವರ್ಷ), ತಂದೆ: ವಿಠಲ, ವಾಸ: 179/2 ತಹಶೀಲ್ದಾರ್ ಗಲ್ಲಿ, ಹುಕ್ಕೇರಿ ತಾಲೂಕು, ಬೆಳಗಾವಿ ಜಿಲ್ಲೆ-590001. ಎಂಬವರನ್ನು ಬೆಳಗಾವಿಯಲ್ಲಿ ಮಾ. 10ರಂದು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 19 ಬ್ಯಾಂಕ್ ಖಾತೆಗಳು, 18 ಚೆಕ್ ಬುಕ್‌ ಗಳು, 15 ಎಟಿಎಮ್ ಕಾರ್ಡ್ ಗಳು, 14 ಮೊಬೈಲ್ ಸಿಮ್‌ಗಳು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *