ಕಾಸರಗೋಡು:(ಮಾ.12) ದೈವಳಿಕೆ ನಿವಾಸಿಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಮಂಡಿಕಾವು ನಿವಾಸಿ ಪ್ರದೀಪ್ (42 ವ) ಅವರ ಸಾವು ಆತ್ಮಹತ್ಯೆ ಎಂಬುದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಸಮಗ್ರ ವರದಿ ರಾಸಾಯನಿಕ ತಪಾಸಣೆ ಬಳಿಕ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ⭕Madikeri: ಕೊಡಗು ಜಿಲ್ಲೆಯ ಹಲವೆಡೆ ಲಘು ಭೂಕಂಪ
ಫೆ. 12ರಂದು ಮುಂಜಾನೆಯಿಂದ ನಾಪತ್ತೆಯಾದ ಬಾಲಕಿ ಹಾಗೂ ಆಟೋ ಚಾಲಕ ಮಾ. 9ರಂದು ಮಂಡಕಾವುವಿನ ಹಿತ್ತಿಲಿನಲ್ಲಿ ಮರಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.



ಹೈಕೋರ್ಟ್ ತೀವ್ರ ತರಾಟೆ:
ಬಾಲಕಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿಐಪಿಯ ಮಗಳು ನಾಪತ್ತೆಯಾಗುತ್ತಿದ್ದಲ್ಲಿ ಪೊಲೀಸರು ಇಂತಹ ನಿಲುವು ಕೈಗೊಳ್ಳುತ್ತಿದ್ದರೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಬಡವರನ್ನು ಹಾಗೂ ವಿಐಪಿಗಳನ್ನು ಒಂದೇ ರೀತಿಯಲ್ಲಿ ನೋಡಬೇಕೆಂದು ನ್ಯಾಯಾಲಯ ತಿಳಿಸಿದೆ.

ಹೈಕೋರ್ಟ್ ಬಾಲಕಿಯ ತಾಯಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿ ಈ ರೀತಿ ನಿರ್ದೇಶನ ನೀಡಿದೆ. ಬಾಲಕಿ ನಾಪತ್ತೆ ತನಿಖೆಯಲ್ಲಿ ಪೊಲೀಸರಿಂದ ಗಂಭೀರ ಲೋಪ ಉಂಟಾಗಿದೆ ಎಂದೂ ನ್ಯಾಯಾಲಯ ತಿಳಿಸಿದೆ.
