Wed. Jan 14th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Ujire: ಉಜಿರೆಯ ಯುವ ಉದ್ಯಮಿ ಪ್ರವೀಣ್ ಹಳ್ಳಿಮನೆ ಅವರಿಂದ ಕಲ್ಮಂಜ ಶಾಲೆಗೆ ಕಂಪ್ಯೂಟರ್ ಹಸ್ತಾಂತರ

ಉಜಿರೆ :(ಮಾ.20) ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಉಜಿರೆಯ ಪ್ರವೀಣ್ ಹಳ್ಳಿಮನೆ ಅವರು ಇದೀಗ ಕಲ್ಮಂಜ ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಮಾದರಿಯಾಗಿದ್ದಾರೆ. ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜಕ್ಕೆ ಕಂಪ್ಯೂಟರ್ ನ ಅಗತ್ಯತೆ ಇತ್ತು. ಹೀಗಾಗಿ ಕಂಪ್ಯೂಟರ್ ಅನ್ನು ಪ್ರವೀಣ್ ಹಳ್ಳಿ ಮನೆಯವರು ಕೊಡುಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ⭕ಹಳಿಯಾಳ : ಅಂಗನವಾಡಿ ಮಕ್ಕಳ ಆಹಾರ ಕಳ್ಳತನ

ಈ ಹಿನ್ನೆಲೆ ಕಂಪ್ಯೂಟರ್ ಕೊಠಡಿಯನ್ನು ಶೇಖರ್ ಟಿ, ಪ್ರಬಂಧಕರು ಮಂಜುಶ್ರೀ ಪ್ರಿಂಟರ್ಸ್ ಉದ್ಘಾಟನೆಗೊಳಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅನ್ನು ಶಾಲೆಗೆ ಗಣ್ಯರು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಪ್ರವೀಣ್ ಹಳ್ಳಿಮನೆ, ಕಳೆದ 3 ತಿಂಗಳಿನಿಂದ ಕಂಪ್ಯೂಟರ್ ಸಂಬಂಧ ಅನೇಕ ಸಮಸ್ಯೆಗಳು ನಮಗೆ ಕಾಡಿದವು. ಯಾವುದೇ ಪತ್ರವನ್ನು ಪ್ರಿಂಟ್ ತೆಗೆಯಬೇಕಾದರೆ ಉಜಿರೆಗೆ ಹೋಗಬೇಕು ಈ ಹಿನ್ನೆಲೆ ನಾವು ಕಂಪ್ಯೂಟರ್ ನ ಅಗತ್ಯತೆ ಕಂಡು ಕಂಪ್ಯೂಟರ್ ನೀಡಿದ್ದೇನೆ ಎಂದರು. ನಾನು ಕೂಡ ಇದೇ ಶಾಲೆಯಲ್ಲಿ ಕಲಿತಿದ್ದು. ನನಗೂ ಈ ಶಾಲೆಯ ಋಣ ಇದೆ ಎಂದರು. ಈ ಬಾರಿ ನನಗೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಶಾಲೆಯ ಅಭಿವೃದ್ಧಿ ಮಾಡಬೇಕು ಎಲ್ಲರ ಸಹಕಾರ ಬೇಕು ಎಂದರು.

ಕಲ್ಮಂಜ ಶಾಲೆಯ ಸಭಾಂಗಣಕ್ಕೆ ಸರ್ಕಾರದಿಂದ ಸಹಾಯ.!
ಕಲ್ಮಂಜ ಶಾಲೆಗೆ ಸಭಾಂಗಣಕ್ಕೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಜೂರು ಮಾಡುವಂತೆ ಆಯಾ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದರು.

ಸಂತೋಷ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ..!
ನಮಗೆ ಕಂಪ್ಯೂಟರ್ ನ ಅಗತ್ಯತೆ ತುಂಬಾನೆ ಇದೆ. ಭೌಗೋಳಿಕ ಸನ್ನಿವೇಶವನ್ನು ಶಿಕ್ಷಕರಿಗೆ ಇನ್ನು ಮುಂದೆ ನಮಗೆ ತಿಳಿಸಲು ಸುಲಭ ಮತ್ತು ನಮಗೆ ಸರಿಯಾದ ರೀತಿಯಲ್ಲಿ ಅರ್ಥಪಡಿಸಬಹುದು. ಈ ಹಿಂದೆ ಶಿಕ್ಷಕರು ಮೊಬೈಲ್ ಬಳಸಿ ಇವೆಲ್ಲ ತಿಳಿಸಿಕೊಡುತ್ತಿದ್ದರು, ಆದರೆ ಈಗ ಕಂಪ್ಯೂಟರ್ ಸಿಕ್ಕಿದೆ ಅದು ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಶಿಧರ ಎಂ ಕಲ್ಮಂಜ , ಕರುಣಾಕರ ಆಚಾರ್ಯ, ಮಿರ್ಷಾದ್ ನಿಡಿಗಲ್ , ಶಾಲಾ ಶಿಕ್ಷಕರು ಮತ್ತಿತರು ಉಪಸ್ಥಿತರಿದ್ದರು. ಸುಬ್ರಾಯ ಸ್ವಾಗತಿಸಿದರು, ಹಮೀದ್ ವಂದಿಸಿದರು.

Leave a Reply

Your email address will not be published. Required fields are marked *