Mon. Apr 14th, 2025

Bantwal: ದ್ವಿಚಕ್ರ ಸವಾರನ ಮೇಲೆ ರಿಕ್ಷಾ ಚಾಲಕ ಹಲ್ಲೆ – ಪ್ರಕರಣ ದಾಖಲು

ಬಂಟ್ವಾಳ:(ಎ.5) ದ್ವಿಚಕ್ರ ಸವಾರನೋರ್ವನ ಮೇಲೆ ರಿಕ್ಷಾ ಚಾಲಕನೋರ್ವ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಒಡ್ಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಲ್ಲಿ ನಡೆದಿದೆ.

ಇದನ್ನೂ ಓದಿ: 🔆ಬಂದಾರು : ಕುರಾಯ ಶ್ರೀ ಸದಾಶಿವ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ


ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಸುನಿಲ್ ಎಂಬಾತನ ಮೇಲೆ ನಂದಾವರ ನಿವಾಸಿ ರಿಕ್ಷಾ ಚಾಲಕ ಅಝೀಲ್ ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ನಗರ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುನಿಲ್ ಮತ್ತು ಆತನ ಸ್ನೇಹಿತ ದಯಾನಂದ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಹಲ್ಲೆ ನಡೆದಿದೆ.


ಪಾಣೆಮಂಗಳೂರು ಪೇಟೆಯಲ್ಲಿ ರಿಕ್ಷಾ ಚಾಲಕ ಅಝೀಲ್ ಯಾವುದೇ ಸೂಚನೆ ನೀಡದೆ ರಾಜರಸ್ತೆಗೆ ಏಕಾಏಕಿ ರಿಕ್ಷಾವನ್ನು ತಿರುಗಿಸಿದ್ದು, ಪಾಣೆಮಂಗಳೂರು ಪೇಟೆಯಿಂದ ನರಿಕೊಂಬು ಕಡೆಗೆ ಹೋಗುತ್ತಿದ್ದ ಸುನಿಲ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿತ್ತು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆರೋಪಿ ಅಝೀಲ್ ಹಲ್ಲೆ ನಡೆಸಿದ್ದಲ್ಲದೆ,ಮುಂದೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *