Sat. Apr 19th, 2025

Belthangady: ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಎ. 22 – 23 ರಂದು “ಗಾನ ನಿನಾದ” ಸಂಗೀತ ಶಿಬಿರ – ಜೀ ಸರಿಗಮಪ ಖ್ಯಾತಿಯ ಶ್ರೀಹರ್ಷರವರು ಏನಂದ್ರು?!

ಬೆಳ್ತಂಗಡಿ:(ಎ.10) ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಂಗೀತ ಆಸಕ್ತ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ : ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ ಬಿಡುಗಡೆ ಮತ್ತು

ಜೀ ಕನ್ನಡ ಸರಿಗಮಪ ಖ್ಯಾತಿಯ ಶ್ರೀಹರ್ಷ ಮೈಸೂರು ಮಾರ್ಗದರ್ಶನದಲ್ಲಿ “ಗಾನ ನಿನಾದ” ಎಪ್ರಿಲ್ 22 ಮತ್ತು ಎಪ್ರಿಲ್. 23 ರಂದು, 2 ದಿನದ ಸಂಗೀತ ಶಿಬಿರದ ತರಬೇತಿಯು ನಡೆಯಲಿದ್ದು, ಸಂಗೀತ ಆಸಕ್ತರಿಗೆ ಕಲಿಯುವ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದಾರೆ.

ಜೀ ಸರಿಗಮಪ ಖ್ಯಾತಿಯ ಶ್ರೀಹರ್ಷರವರು ಏನಂದ್ರು?!:
ಯಾರ್ಯಾರು ಸುತ್ತಮುತ್ತ ಒಳ್ಳೆಯ ಗಾಯಕರಿದ್ದೀರಿ ಅವರಿಗೆ ಒಂದು ಉತ್ತಮವಾದ ಅವಕಾಶ. ಎ. 22 & 23 ರಂದು ಕನ್ಯಾಡಿ ಯಲ್ಲಿ ಎರಡು ದಿನಗಳ ಸುಗಮ ಸಂಗೀತ ಶಿಬಿರ ನಡೆಯಲಿದೆ. ಹಾಗಾಗಿ ನಾನು (ಹರ್ಷ) ತನ್ನ ಹಾಡುಗಳನ್ನು ಹಂಚಿಕೊಳ್ಳಲು ಬರುತ್ತಿದ್ದೇನೆ. ಕವಿ ಏನು ಹೇಳಲು ಇಷ್ಟ ಪಡುತ್ತಿದ್ದಾರೆ, ಹಾಡಿನ ಅರ್ಥವೇನು ,

ಹಾಡೋದು ಹೇಗೆ, ಹಾಡನ್ನು ಅನುಭವಿಸಿ ಹಾಡೋದಕ್ಕೆ ನಾವು ಏನೇನು ಪ್ರಯತ್ನ ಪಡಬೇಕು, ಈ ಎಲ್ಲಾ ವಿಷಯಗಳನ್ನೂ ಒಳಗೊಂಡಂತೆ
ಮಕ್ಕಳಿಗೆ ಒಂದು ಬ್ಯಾಚ್, ದೊಡ್ಡವರಿಗೆ ಇನ್ನೊಂದು ಬ್ಯಾಚ್ ನ ಹಾಗೇ ವ್ಯವಸ್ಥಿತವಾಗಿ ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಪ್ರಸ್ತುತ ಪಡಿಸುತ್ತಿದ್ದಾರೆ. ಆ ಎರಡು ದಿನ ನಾವು ಒಳ್ಳೆಯ ಹಾಡುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳೋಣ ಎಂದು ಹೇಳಿದರು.

INSTAGRAM LINK:

https://www.instagram.com/reel/DHnfzIVIFyT/?utm_source=ig_web_copy_link&igsh=MzRlODBiNWFlZA==

FACEBOOK LINK:

https://www.facebook.com/share/v/1BqdA7cZns

ಸಂಗೀತ ತರಬೇತಿ ಕಾರ್ಯಾಗಾರದ ನೋಂದಣಿಗಾಗಿ 8197236791 / 8748968791 / 9108181286 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *