ಬಂದಾರು : (ಎ. 22 ) ಶ್ರೀ ಸದಾಶಿವ ದೇವರ ಮೂಲಕ್ಷೇತ್ರ ಪುತ್ತಿಲಗುತ್ತು ಬಂದಾರು, ಶ್ರೀ ಸದಾಶಿವ ಭಜನಾ ಮಂಡಳಿ (ರಿ.) ಕುರಾಯ ಬಂದಾರು, ಶ್ರೀ ಸದಾಶಿವ ಮಕ್ಕಳ ಕುಣಿತ ಭಜನಾ ಮಂಡಳಿ ,

ಇದನ್ನೂ ಓದಿ: ⭕ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್!!!
ಕುರಾಯ ಬಂದಾರು ಇದರ 42 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತಿಲ ಗುತ್ತು ಶ್ರೀ ಸದಾಶಿವ ದೇವರ ಮೂಲಕ್ಷೇತ್ರ ದೇವರ ಗದ್ದೆಯಲ್ಲಿ ರುದ್ರಾಭಿಷೇಕ ಶಿವಪೂಜೆ, ರಂಗಪೂಜೆ, ಅರ್ಧ ಏಕಾಹ ಭಜನೆ ಭಜನಾ ಕಮ್ಮಟೋತ್ಸವ ಮತ್ತು ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾ ಪ್ರತಿಷ್ಠೆ ಕಾರ್ಯಕ್ರಮವು ನಡೆಯಲಿದೆ.


ರಾತ್ರಿ 9.30 ಕ್ಕೆ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


