ಕಾಶಿಪಟ್ಣ:(ಮೇ.28) ಕಾಶಿಪಟ್ಣ ಗ್ರಾಮದ ಬಾಂಧವ್ಯ ಮಿತ್ತೊಟ್ಟು ಮನೆಯ ಕರಿಯ ಪೂಜಾರಿ ಅವರ ಪುತ್ರ ದೀಪಕ್ ಕೆ ಸಾಲ್ಯಾನ್ (ವ.33)ಇವರು Seviour pancreatitis ಎಂಬ ಜಠರ ಮತ್ತು ಪಿತ್ತಕೋಶಸಂಬಂಧಿ ಖಾಯಿಲೆಗೆ ತುತ್ತಾಗಿದ್ದರು.

ಇದನ್ನೂ ಓದಿ: 🟣ಮಿಯ್ಯಾರು: ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವತಿಯಿಂದ ಮಿಯ್ಯಾರಿನಲ್ಲಿ ಡೆಂಗ್ಯೂ ಜಾಗೃತಿ ಶಿಬಿರ
ಇವರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಹಾಸ್ಪಿಟಲ್ನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ.27 ರಂದು ನಿಧನರಾಗಿದ್ದಾರೆ.

ಮೃತ ದೀಪಕ್ ಅವರು ಕಳೆದ ಹಲವಾರು ವರ್ಷಗಳಿಂದ ಕಾಶಿಪಟ್ಣದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಇವರು ತಂದೆ ತಾಯಿ , ಸಹೋದರರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.




