ಮಿತ್ತಬಾಗಿಲು:(ಮೇ.28) ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಪ್ರಕೃತಿಯ ಮಡಿಲಲ್ಲಿ ಈ ಸದಾಶಿವನ ಆಲಯವಿದೆ.

ಸದಾಶಿವ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥವನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಭಕ್ತರಿಗಿದೆ. ಕ್ಷೇತ್ರದ ಕಾರ್ಣಿಕ ಅಪಾರವಾದದ್ದು. ಹಾಗೆಯೇ ಸದಾಶಿವ ದೇವಸ್ಥಾನದ ಅರ್ಚಕರು ದೇವರ ಮೇಲೆ ಇಟ್ಟಂತಹ ಪ್ರೀತಿ, ಭಕ್ತಿ ವಿಶೇಷವಾಗಿದೆ ಅಂತಾನೇ ಹೇಳ್ಬೋದು.
ನೀರಿನ ಮಟ್ಟ ಎಷ್ಟೇ ಇದ್ದರೂ ಸಹ ಅದನ್ನೂ ಲೆಕ್ಕಿಸದೆ ದೇವರ ಮೇಲಿನ ಅಭಿಮಾನದಿಂದ ಶ್ರೀಧರ್ ಭಟ್ ರವರು ಕೂಡಬೆಟ್ಟು ಸದಾಶಿವ ದೇವಸ್ಥಾನದಲ್ಲಿ ಪೂಜೆಗೆ ಹೋಗಲು ಶ್ರಮಪಡುತ್ತಿದ್ದಾರೆ. ಶ್ರೀಧರ್ ಭಟ್ ರವರು ದೇವರ ಸೇವೆಗೆ ತಮ್ಮ ಶ್ರಮವನ್ನು ಅರ್ಪಿಸುವ ಮೂಲಕ, ನಮ್ಮ ಹೃದಯಗಳಲ್ಲಿ ಭಕ್ತಿಯ ಬೆಳಕನ್ನು ಹರಡುತ್ತಿದ್ದಾರೆ.




ಅವರ ಪೂಜಾ ಶ್ರಮವು ದೇವರ ದಯೆಯ ಪ್ರತಿಬಿಂಬವಾಗಿದೆ. ಅವರ ಪೂಜಾ ಶ್ರಮವು ದೇವರ ಸೇವೆಯ ನಿಜವಾದ ಮಾದರಿಯಾಗಿದ್ದು, ನಮ್ಮಲ್ಲಿ ಭಕ್ತಿಯ ನವಚೇತನವನ್ನು ಉಂಟುಮಾಡುತ್ತದೆ. ದೇವರ ಮೇಲಿನ ನಿಷ್ಠೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ಮತ್ತು ನಾವು ಅವರ ಈ ಶ್ರಮಕ್ಕೆ ಸದಾ ಋಣಿಯಾಗಿರುತ್ತೇವೆ.

