ಪುತ್ತೂರು:(ಮೇ.28) ಯುವಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ಪಾಣಾಜೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೂಡಿಗೆರೆ ಶಾಸಕಿ ಶ್ರೀಮತಿ ನಯನ ಮೋಟಮ್ಮ ಭೇಟಿ
ಆರ್ಲಪದವು ನಿವಾಸಿ ಪ್ರಕಾಶ್ (28) ಹಲ್ಲೆಗೊಳಗಾದ ವ್ಯಕ್ತಿ.
ಧನಂಜಯ ಮತ್ತು ಪುನೀತ್ ಆರೋಪಿಗಳು.
ಪಾಣಾಜೆ ಗ್ರಾಮದ ವೈನ್ ಶಾಪ್ನಿಂದ ಬಿಯರ್ ಬಾಟಲಿಯನ್ನು ಖರೀದಿ ಮಾಡಿ, ವೈನ್ ಶಾಪ್ಗೆ ಹೊಂದಿಕೊಂಡಂತೆ ಇರುವ ಶೆಡ್ನಲ್ಲಿದ್ದ ಚಯರ್ನಲ್ಲಿ ಕುಳಿತು ಬಿಯರ್ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ರಾತ್ರಿ 8.30 ಗಂಟೆಗೆ ಪರಿಚಯದವರಾದ ಧನಂಜಯ ಮತ್ತು ಪುನೀತ್ ಎಂಬುವವರು ಬಂದಿದ್ದಾರೆ.


ನಂತರ ಬೈಯಲು ಪ್ರಾರಂಭ ಮಾಡಿದ್ದಾರೆ. ಅನಂತರ ಟೇಬಲ್ ಮೇಲೆ ಇದ್ದ ಬಿಯರ್ ಬಾಟಲಿಯಿಂದ ಧನಂಜಯ್, ಪ್ರಕಾಶ್ ತಲೆಗೆ ಹೊಡೆದಿದ್ದು, ಪುನೀತ್ ಕೈಯಿಂದ ಹೊಡೆದಿದ್ದಾನೆ. ಪ್ರಕಾಶ್ ಬಲಕಾಲಿಗೆ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ನೋವಿನಿಂದ ಪ್ರಕಾಶ್ ಬೊಬ್ಬೆ ಹೊಡೆಯುತ್ತಿದ್ದಂತೆ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯ ನಂತರ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪ್ರಕಾಶ್ ಅವರ ಅಣ್ಣ ನಂತರ ಪ್ರಕಾಶ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಕುರಿತು ಗಾಯಾಳು ಪ್ರಕಾಶ್ ನೀಡಿರುವ ದೂರಿನ ಪ್ರಕಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
