ಬಂಟ್ವಾಳ:(ಮೇ.31) ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ. 27 ರಂದು ನಡೆದ ಅಬ್ದುಲ್ ರಹೀಂ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, (ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ 54/2025 ಕಲಂ: 191[1], 191[2], 191[3], 118[1]. 118 [2], 109, 103 3 190BNS 2023), ಪಡೆಯಲಾಗಿತ್ತು.

ತನಿಖೆ ಮುಂದುವರಿದಂತೆ ದಿನಾಂಕ 30.05.2025 ರಂದು ಸುಮಿತ್ ಆಚಾರ್ಯ (27), ತೆಂಕಬೆಳ್ಳುರು ಗ್ರಾಮ, ಬಂಟ್ವಾಳ ಹಾಗೂ ರವಿರಾಜ್ (23) ಬಡಗಬೆಳ್ಳೂರು ಗ್ರಾಮ ಬಂಟ್ವಾಳ ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ತನಿಖೆ ಪ್ರಗತಿಯಲ್ಲಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




