ಮೊಗ್ರು:(ಮೇ.31) ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ) ಅಲೆಕ್ಕಿ – ಮುಗೇರಡ್ಕ , ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು ಇದರ ಶ್ರೀ ರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ ಮಕ್ಕಳ ಹೊರಾಂಗಣ ಆಟಿಕೆ ಮೈದಾನ, ರಾಷ್ಟ್ರ ಧ್ವಜ ಸ್ತಂಭ , ಭಗವಧ್ವಜ ಕಂಬ, ಶುದ್ಧ ಕುಡಿಯುವ ನೀರಿನ ಪ್ಯೂರಿಫಿಯರ್ ಉದ್ಘಾಟನೆ ಹಾಗೂ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಜೂನ್ 02 ರಂದು ಶ್ರೀ ರಾಮ ಶಿಶು ಮಂದಿರ , ಅಲೆಕ್ಕಿ – ಮುಗೇರಡ್ಕದಲ್ಲಿ ನಡೆಯಲಿದೆ.

ಇದನ್ನೂ ಓದಿ: ⭕Karkala: ಕಂಬಳ ಕೋಣಗಳ ಹಟ್ಟಿಗೆ ಬೆಂಕಿ
ಬೆಳಿಗ್ಗೆ 9:00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ದೀಪ ಪ್ರಜ್ವಲನೆ ಹಾಗೂ ಧ್ವಜ ಕಂಬದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರು ನೆರವೇರಿಸಲಿದ್ದಾರೆ.


ಮಕ್ಕಳ ಹೊರಾಂಗಣ ಆಟಿಕೆ ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ನ ಮಾಲಕರಾದ ಕೆ.ಮೋಹನ್ ಕುಮಾರ್ ರವರು ನೆರವೇರಿಸಲಿದ್ದಾರೆ. ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆಯನ್ನು ಕಿರಣ್ ಚಂದ್ರ ಡಿ.ಪುಷ್ಪಗಿರಿ ಯವರು ಮಕ್ಕಳಿಗೆ ಹಸ್ತಾಂತರಿಸಲಿದ್ದಾರೆ. ಶುದ್ಧ ಕುಡಿಯುವ ನೀರಿನ ಪ್ಯೂರಿಫಿಯರ್ ಉದ್ಘಾಟನೆಯನ್ನು ಬಂದಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ನೆರವೇರಿಸಲಿದ್ದಾರೆ.


