ಉಪ್ಪಿನಂಗಡಿ: (ಮೇ.31) ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 77ನೇ ತಾಳಮದ್ದಳೆಯಾಗಿ ಉತ್ತರ ವಿವಾಹವು ಮಂಗಳೂರು ಬೋಳಾರದ ಮುಳಿಹಿತ್ಲಿನ ಶ್ರೀ ಮಾರಿಯಮ್ಮ ಕೃಪಾ ಮತ್ತು ಶ್ರೀ ವಾಸುದೇವ ಕೃಷ್ಣ ನಿಲಯದ ಗೃಹಪ್ರವೇಶದ ಅಂಗವಾಗಿ ಜರಗಿತು.

ಇದನ್ನೂ ಓದಿ: ⭕ನಾಪತ್ತೆಯಾಗಿದ್ದ ಪ್ರತೀಕ್ಷಾ ಮುಸ್ಲಿಂ ಪ್ರಿಯಕರನ ಜೊತೆ ಪತ್ತೆ..!
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ,ನಿತೀಶ್ ಮನೋಳಿತ್ತಾಯ ಹಿಮ್ಮೇಳದಲ್ಲಿ ಶಿವದಾಸ್ ಪ್ರಭು ಮಂಗಳೂರು, ಪರೀಕ್ಷಿತ್.ಯಚ್, ಅರ್ಥಧಾರಿಗಳಾಗಿ ಶ್ರೀಧರ ಎಸ್ಪಿ ಸುರತ್ಕಲ್ (ಕೌರವ, ಅಭಿಮನ್ಯು)ಸತೀಶ ಶಿರ್ಲಾಲು(ಸುಶರ್ಮ) ಶ್ರುತಿ ವಿಸ್ಮಿತ್(ಭೀಮ, ಉತ್ತರೆ) ಜಯರಾಮ ಭಟ್ ದೇವಸ್ಯ(ವಿರಾಟ)ಗುಡ್ಡಪ್ಪ ಬಲ್ಯ(ಧರ್ಮರಾಯ) ಜಿನೇಂದ್ರ ಜೈನ್ ಬಳ್ಳಮಂಜ(ಕರ್ಣ )ಈಶ್ವರ ಪ್ರಸಾದ್ ಪಿ.ವಿ ನಿಡ್ಲೆ(ಅರ್ಜುನ )ದಿವಾಕರ ಆಚಾರ್ಯ ಗೇರುಕಟ್ಟೆ(ಭೀಷ್ಮ, ಶ್ರೀಕೃಷ್ಣ) ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಾಯೋಜಕರಾದ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್ ಮತ್ತು ಜಗದೀಶ್ ಭಟ್ ಇವರನ್ನು ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.
ದೇವತಾರಾಧನೆಯ ಭಾಗವಾಗಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂಘದ ಸರಣಿ ತಾಳಮದ್ದಳೆಯು ಶತಕವನ್ನು ದಾಟಿ ಮುನ್ನಡೆಯಲೆಂದು ಅರ್ಚಕ ಜಗದೀಶ್ ಭಟ್ ಶುಭ ಹಾರೈಸಿದರು. ಅರ್ಚಕ ನಾರಾಯಣ ಭಟ್ ಸಂಘದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.


ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಶ್ರೀಧರ್ ಎಸ್ಪಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.

