Tue. Jun 3rd, 2025

Karaya: ಕರಾಯ ಗ್ರಾಮ ಖಂಡಿಗ ಎಂಬಲ್ಲಿ ಕೃಷಿಗೆ ಗುಡ್ಡ ಕುಸಿತ – ಅಪಾರ ಪ್ರಮಾಣದಲ್ಲಿ ಕೃಷಿಗೆ ಹಾನಿ

ಕರಾಯ :(ಜೂ.2) ಮೇ 30 ರಂದು ಸುರಿದ ಧಾರಾಕಾರ ಸುರಿದ ಮಳೆಗೆ ಕರಾಯ ಗ್ರಾಮದ ಖಂಡಿಗ ನಿವಾಸಿ ದೊಡ್ಡಪ್ಪ ಗೌಡ, ಶ್ರೀಧರ ಗೌಡ, ಬೊಮ್ಮಣ್ಣ ಗೌಡರ ತೋಟಕ್ಕೆ ಸುಮಾರು ನಾಲ್ಕರಿಂದ, ಐದು ಕಡೆ ಪ್ರವಾಹದ ರೀತಿಯಲ್ಲಿ ಗುಡ್ಡ ಕುಸಿದು ಬಿದ್ದು ಹರಿಯುವ ತೋಡು ಬಂದ್ ಆಗಿ ಅಡಿಕೆ ತೋಟದಲ್ಲೇ ನೀರು ಹರಿದಾಡುತ್ತಿದ್ದು

ಅಪಾರ ಕೃಷಿ ಹಾನಿಯಾಗಿದ್ದು, ನೀರು ಹೀಗೆ ತೋಟದಲ್ಲಿ ಹರಿದುಹೋದದ್ದೇ ಆಗಿದ್ದಲ್ಲಿ ತೋಟವು ಸಂಪೂರ್ಣ ನಾಶವಾಗುತ್ತದೆ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಂಬಂಧ ಪಟ್ಟ ಇಲಾಖೆಯೂ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *