Thu. Jun 5th, 2025

Puttur: ಅಪ್ಪನ ನೋಡಲು ಬಂದ ಮಗಳಿಗೆ ಕಾದಿತ್ತು ಶಾಕ್..!

ಪುತ್ತೂರು:(ಜೂ.3) ತಂದೆಯ ಯೋಗಕ್ಷೇಮ ವಿಚಾರಿಸಲು ಬಂದ ಮಗಳಿಗೆ ಶಾಕ್‌ ಒಂದು ಕಾದಿತ್ತು. ಅದೇನೆಂದು ತಿಳಿದರೆ ನೀವೂ ಶಾಕ್‌ ಆಗೋದು ಖಂಡಿತ.

ಇದನ್ನೂ ಓದಿ: ⭕ಉಪ್ಪಿನಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಸಂದೇಶ

ತಂದೆಯ ಯೋಗಕ್ಷೇಮ ವಿಚಾರಿಸಲು ಬಂದ ಮಗಳಿಗೆ ಮನೆಯೊಳಗೆ ತಂದೆಯು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 1, ರಂದು ಬೆಳಕಿಗೆ ಬಂದಿದೆ. ಮೃತರನ್ನು ಕೆದಂಬಾಡಿ ಗ್ರಾಮದ ಮುಂಡಾಳ ನಿವಾಸಿ ಕೃಷ್ಣಪ್ಪ ಗೌಡ (58) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಮೃತರ ಮಗಳು ಬೆಳ್ತಂಗಡಿ ನಿವಾಸಿ ಸುಪ್ರಿಯ (33) ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು ಅದರಲ್ಲಿ ಅವರ ತಂದೆ ಕೃಷ್ಣಪ್ಪ ಗೌಡ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಕುಡಿತದ ಚಟವೂ ಇತ್ತು ಎಂದು ತಿಳಿಸಿದ್ದಾರೆ. ಸುಪ್ರಿಯ ಮತ್ತು ಅವರ ಅಕ್ಕ ಆಗಾಗ ತಂದೆಯ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.

ಅದರಂತೆ, ಸುಪ್ರಿಯ ಅವರು ಏಪ್ರಿಲ್ 20 ರಂದು ತವರು ಮನೆಗೆ ಬಂದಿದ್ದು. ನಂತರ ಮೇ 29, ಸವಣೂರಿನಲ್ಲಿದ್ದ ತಮ್ಮ ಚಿಕ್ಕಮ್ಮನ ಮನೆಗೆ ತೆರಳಿದ್ದರು. ಜೂನ್ 1, ರಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಚಿಕ್ಕಮ್ಮನ ಮನೆಯಿಂದ ವಾಪಸ್ ತಂದೆಯ ಮನೆಗೆ ಬಂದಾಗ. ಮನೆಯ ಹೊರಗಿನ ಬಲ್ಬ್ ಉರಿಯುತ್ತಿತ್ತು. ಆದರೆ, ಮನೆಯ ಮುಂಭಾಗದ ಹಾಗೂ ಹಿಂಭಾಗದ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದವು.

ಮನೆಯ ಒಳಗಿನಿಂದ ತೀವ್ರ ದುರ್ವಾಸನೆ ಬರುತ್ತಿದ್ದುದನ್ನು ಸುಪ್ರಿಯ ಗಮನಿಸಿದ್ದಾರೆ. ಸಂಶಯಗೊಂಡು ಕಿಟಕಿಯಿಂದ ನೋಡಿದಾಗ, ತಂದೆ ಕೃಷ್ಣಪ್ಪ ಗೌಡ ಅವರು ತಮ್ಮ ಕೋಣೆಯ ಬೆಂಚಿನ ಮೇಲೆ ಬೆಡ್‌ ಶೀಟ್ ಹೊದ್ದು ಮಲಗಿದ್ದು. ಅವರ ದೇಹದ ಮೇಲಿನಿಂದ ನೊಣಗಳು ಹಾರಾಡುತ್ತಿರುವುದು ಕಂಡುಬಂತು. ತಕ್ಷಣ ಸುಪ್ರಿಯ ಅವರು ತಮ್ಮ ಚಿಕ್ಕಪ್ಪನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಚಿಕ್ಕಪ್ಪ ಸ್ಥಳಕ್ಕೆ ಧಾವಿಸಿ. ಮನೆಯ ಮಾಡಿನ ಹಂಚುಗಳನ್ನು ತೆಗೆದು ಒಳಗೆ ಪ್ರವೇಶಿಸಿ ನೋಡಿದಾಗ, ಕೃಷ್ಣಪ್ಪ ಗೌಡ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ದೇಹವು ಕೊಳೆತ ಸ್ಥಿತಿಯಲ್ಲಿದ್ದು, ಕೆಲವು ದಿನಗಳ ಹಿಂದೆಯೇ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 25/2025, ಕಲಂ 194 ಬಿ.ಎನ್.ಎಸ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *