Fri. Jun 6th, 2025

Udupi: ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ ನಲ್ಲಿ ಶಾಲಾ ಆರಂಭೋತ್ಸವ

ಉಡುಪಿ: (ಜೂ.4) ಆನೆಗುಂದಿ ಶ್ರೀ ಸರಸ್ವತಿ ಪೀಠ ಕುತ್ಯಾರು ಸೂರ್ಯಚೈತನ್ಯ ಸಂಸ್ಥೆಯಲ್ಲಿ ಶಾಲಾ ಆರಂಭೋತ್ಸವವು ನೂತನವಾಗಿ ದಾಖಲಾದ ವಿದ್ಯಾರ್ಥಿಗಳ, ಪೋಷಕರ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಜಾಥದೊಂದಿಗೆ ಆರಂಭವಾಯಿತು.
ಆಡಳಿತ ಮಂಡಳಿ ಅಸ್ಸೆಟ್ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ಮತ್ತು ಅಧ್ಯಕ್ಷರಾದ ಸೂರ್ಯಕುಮಾರ ಹಳೆಯಂಗಡಿ ಜಾಥಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ⭕ಸುಹಾಸ್ ಶೆಟ್ಟಿ ಕೊಲೆ ಕೇಸ್​

ಶಾಲಾ ಅವರಣದಲ್ಲಿ ವಿದ್ಯಾರ್ಥಿಗಳನ್ನು ಆರತಿ ಮಾಡಿ ಪುಷ್ಪವೃಷ್ಠಿಯೊಂದಿಗೆ ಶ್ರೀ ಸರಸ್ವತಿ ಪೀಠ ಮಾತೃ ಮಂಡಳಿ ಅಧ್ಯಕ್ಷ ಸಂಧ್ಯಾ ಲಕ್ಷ್ಮಣ ಆಚಾರ್ಯ, ಉಷಾ ಸುಬ್ರಮಣ್ಯ, ಆಶಾ ನಾಗರಾಜ್, ಪ್ರಶಾಂತಿ ರಾಘವೇಂದ್ರ ಆಚಾರ್ಯ ಮತ್ತು ಶಿಕ್ಷಕ ವೃಂದದವರು ಸಂಸ್ಥೆಗೆ ಸ್ವಾಗತಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಸ್ಸೆಟ್ ಅಧ್ಯಕ್ಷರಾದ ಸೂರ್ಯಕುಮಾರ್ ಹಳೆಯಂಗಡಿ ವಹಿಸಿದ್ದರು. ಅಸ್ಸೆಟ್ ಕಾರ್ಯದರ್ಶಿ ಗುರುರಾಜ್ ಆಚಾರ್ಯ ಕೆ.ಜೆ ಮಾತನಾಡಿ ಸಂಸ್ಥೆಯ ಭೌತಿಕ ಸೌಲಭ್ಯಗಳನ್ನು ಹೆಚ್ಚಿಸುವುದರೊಂದಿಗೆ ಅಬಾಕಾಸ್, ವೇದಗಣಿತ, ಯಕ್ಷಗಾನನಾಟ್ಯ, ಕುಣಿತ ಭಜನೆ, ಕರಾಟೆ, ಸ್ಕೌಟ್ ಗೈಡ್ಸ್, ಬುಲ್ ಬುಲ್,ಬನ್ನಿ ದಳಗಳ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಆಡಳಿತ ಮಂಡಳಿಯ ಸದಸ್ಯರಾದ ಜನಾರ್ದನ ಆಚಾರ್ಯ ಬಜಕೂಡ್ಲು, ಸಂಧ್ಯಾ ಲಕ್ಷ್ಮಣ ಆಚಾರ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಜಯಲಕ್ಷ್ಮಿ ತಂತ್ರಿ, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಶೋಭಾ ಆಚಾರ್ಯ ಮಾತನಾಡಿ ಸಂಸ್ಥೆಯ ಅಭಿವೃದ್ಧಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಬಗ್ಗೆ ಅಭಿನಂದಿಸಿದರು.

ವೇದಿಕೆಯಲ್ಲಿ ಅಸೆಟ್ ಉಪಾಧ್ಯಕ್ಷರಾದ ವಿವೇಕ ಆಚಾರ್ಯ ಶಿರ್ವ, ಸದಸ್ಯರಾದ ನಾಗರಾಜ ಆಚಾರ್ಯ ಕಾಡಬೆಟ್ಟು, ರಾಘವ ಆಚಾರ್ಯ ಉಡುಪಿ, ಸುಂದರ ಆಚಾರ್ಯ ಮರೋಳಿ ಉಪಸ್ಥಿತರಿದ್ದರು.

ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಶಾಲಾ ಆರಂಭೋತ್ಸವದ ಮಹತ್ವದ ಬಗ್ಗೆ ತಿಳಿಸಿದರು.ವಿದ್ಯಾರ್ಥಿನಿಯರಾದ ಸಮನ್ವಿ ಮತ್ತು ಪ್ರಣಮ್ಯ ಇವರ ಜನ್ಮದಿನವನ್ನು ಸಾಮೂಹಿಕವಾಗಿ ಆಚರಿಸಲಾಯಿತು. 100% ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಪ್ರಭಾರ ಮುಖ್ಯ ಶಿಕ್ಷಕಿ ಅನಿತಾ ಸ್ವಾಗತಿಸಿದರು. ಉಪಮುಖ್ಯ ಶಿಕ್ಷಕಿ ಸೌಮ್ಯ ಯೋಗಿಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ರಮ್ಯಾ ವಂದಿಸಿದರು. ಶಿಕ್ಷಕಿ ವಾಣಿ ಮತ್ತು ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *