ಉಜಿರೆ:(ಜೂ.11) ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ (NABH ಪುರಸ್ಕೃತ) ದಿನಾಂಕ 11.06.2025ರಂದು ನಡೆದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ ಇವರು ಮಾತನಾಡಿ, ನಮ್ಮ ದೈಹಿಕ ಕ್ಷಮತೆ ನಮ್ಮ ಮೂಳೆಯ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: ⭕ಫೇಸ್ಬುಕ್ ಲವ್, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ
ಸದೃಢವಾದ ಎಲುಬು ಮತ್ತುಮೂಳೆಗಳಿಂದ ನಮ್ಮ ದೇಹವೂ ಕೂಡ ಸದೃಢವಾಗಿರುತ್ತದೆ. ಅದಕ್ಕಾಗಿ ವರ್ಷಕೊಮ್ಮೆಯಾದರೂ ನಾವು ಇಂಥ ಶಿಬಿರದಲ್ಲಿ ಪಾಲ್ಗೊಂಡು ನಮ್ಮ ಮೂಳೆ ಸಾಂದ್ರತೆಯನ್ನು ಪರೀಕ್ಷಿಸಿ ನಿಖರವಾದ ದೃಢತೆಯನ್ನು ತಿಳಿದು ಏನಾದರೂ ಕೊರತೆಯಿದ್ದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚು ಹೆಚ್ಚಾಗಿ ಪಡೆದುಕೂಳ್ಳಬೇಕೆಂದು ಕರೆ ನೀಡಿದರು.

ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ಮತ್ತು ಕೈ ಮೈಕ್ರೋಸರ್ಜರಿ ಪರಿಣಿತರಾದ ಡಾ. ರೋಹಿತ್ ಜಿ ಕೆ MBBS, MS(Ortho) ಯವರು ಮಾತನಾಡಿ, ನಮ್ಮ ಆರೋಗ್ಯದ ಮೇಲೆ ಮೂಳೆ ಸಾಂದ್ರತೆ ಯಾವ ರೀತಿ ಪರಿಣಾಮವನ್ನು ಬೀಳುತ್ತದೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಮತ್ತು ಎಲುಬು ಮೂಳೆಗಳ ಕಡಿಮೆ ಕ್ಷಮತೆಯಿಂದ ಯಾವ ರೀತಿಯ ಸಮಸ್ಯೆಗಳು ನಮ್ಮ ಶರೀರದ ಮೇಲೆ ಆಗುತ್ತದೆಂದು ವಿವರಣೆ ನೀಡಿದರು.

ಡಾ. ಭಾರತಿ ಜಿ ಕೆ ಇವರು ಕಾರ್ಯಕ್ರಮದ ಪ್ರಸ್ತಾವನೆಗೈದು ಕೊನೆಯಲ್ಲಿ ವಂದಿಸಿದರು. ಆಸ್ಪತ್ರೆಯ PRO ಎಸ್ ಜಿ ಭಟ್ ಇವರು ಸ್ವಾಗತಿಸಿ ನಿರೂಪಿಸಿದರು.


