Fri. Jun 13th, 2025

Belthangady: ಬೆಳ್ತಂಗಡಿ ಹಾಗೂ ಗುರುವಾಯನಕೆರೆ ತಾಲೂಕಿನ ರೈತರಿಗೆ ಬಿದಿರು ನಾಟಿಯ ತಾಂತ್ರಿಕ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: (ಜೂ.12) ಬೆಳ್ತಂಗಡಿ ಹಾಗೂ ಗುರುವಾಯನಕೆರೆ ತಾಲೂಕಿನ ಆಯ್ದ ರೈತರಿಗೆ ಬಿದಿರು ನಾಟಿಯ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಮಾನ್ಯ ಮನೋಜ್ ಮೀನೇಜಸ್ ಪ್ರಾದೇಶಿಕ ನಿರ್ದೇಶಕರು ಕೃಷಿ ವಿಭಾಗ ಕೇಂದ್ರ ಕಚೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ⭕Kantara Chapter 1 : ರಿಷಬ್ ಶೆಟ್ಟಿ “ಕಾಂತಾರ” ಚಿತ್ರಕ್ಕೆ ಸಾಲು ಸಾಲು ಹಿನ್ನಡೆ – ದೈವದ ನೀಡಿದ ಎಚ್ಚರಿಕೆಯಾದರೂ ಏನು..?

ಈ ಕಾರ್ಯಕ್ರಮದ ಪ್ರಯೋಜನ, ಸೌಲಭ್ಯ ಹಾಗೂ ಅನುಷ್ಠಾನಗೊಳಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕೆ. ಎನ್. ಮೂರ್ತಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಬ್ಯಾಂಬೊ ಸೊಸೈಟಿ ಅಪ್ ಬೆಂಗಳೂರು ಇವರು ಬಿದಿರು ನಾಟಿ, ಬೇಕಾದ ದಾಖಲಾತಿ, ಪ್ರೋತ್ಸಾಹ ಧನ ಇತ್ಯಾದಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ರಾಜು ಶೆಟ್ಟಿ ರಬ್ಬರ್ ಸೊಸೈಟಿ ಬೆಳ್ತಂಗಡಿ ಇವರು ರಬ್ಬರ್ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ತ್ಯಾಗರಾಜ್ ಅರಣ್ಯಾಧಿಕಾರಿ, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯಾದ ಯಶೋಧರ, ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ, ಕೇಂದ್ರ ಕಚೇರಿ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಾಗೂ ಮಾರುತಿ ಕೃಷಿ ಮೇಲ್ವಿಚಾರಕರಾದ ರಾಮಕುಮಾರ್ ಹಾಗೂ ಕೃಷ್ಣ, ಎರಡು ತಾಲೂಕಿನ ಸುಮಾರು 50 ಕ್ಕಿಂತ ಮೇಲ್ಪಟ್ಟು ರೈತರು ತರಬೇತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.

Leave a Reply

Your email address will not be published. Required fields are marked *