ಉಜಿರೆ:(ಜೂ.16) ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರವು ಜೂನ್. 22 ರಂದು ಬೆಳಗ್ಗೆ 9:00ರಿಂದ ಮಧ್ಯಾಹ್ನ 1.00ರ ವರೆಗೆ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ.


ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು, 10% ರಿಯಾಯಿತಿ ದರದಲ್ಲಿ ಔಷಧ, ಒಳರೋಗಿ ವಿಭಾಗದ ಶುಲ್ಕದಲ್ಲಿ 20% ರಿಯಾಯಿತಿ, ಲ್ಯಾಬ್ & ರೇಡಿಯಾಲಜಿ ಪರೀಕ್ಷೆಯಲ್ಲಿ 20% ರಿಯಾಯಿತಿ ದೊರೆಯಲಿದೆ.

ಉಚಿತ ತಪಾಸಣೆಗಳು:
- ಸಾಮಾನ್ಯ ಶಸ್ತ್ರಚಿಕಿತ್ಸಾ ತಪಾಸಣೆ
- ಹರ್ನಿಯಾ(ಕಿಬ್ಬೊಟ್ಟೆ, ತೊಡೆಸಂದು, ಹೊಕ್ಕಳು) ಕಡಿಮೆ ಮಾಡಬಹುದಾದ ಊತ
- ಪಿತ್ತಕೋಶದ ಕಲ್ಲುಗಳು(ಕಿಬ್ಬೊಟ್ಟೆಯ ನೋವು , ಕಾಮಾಲೆ)
- ಅಪೆಂಡಿಸೈಟಿಸ್(ಕೆಳಗಿನ ಬಲ ಹೊಟ್ಟೆ ನೋವು)
- ಮೂಲವ್ಯಾಧಿ
- ಪಿಸ್ತುಲಾ
- ವೃಷಣಗಳ ನೋವು ರಹಿತ ಊತ
- ಚರ್ಮದ ಗಾಯಗಳು(ಗೆಡ್ಡೆಗಳು)
ಶಿಬಿರದಲ್ಲಿ ತಜ್ಞ ವೈದ್ಯರಾದ, ಡಾ.ಬಾಲಾಜಿ ಪ್ರಭಾಕರನ್ , MBBS MS, ಜನರಲ್ ಸರ್ಜನ್ , ಡಾ.ಕಿರಣ್ ಕುಮಾರ್, MBBS MS, ಜನರಲ್ ಸರ್ಜನ್ ಪಾಲ್ಗೊಳ್ಳಲಿದ್ದಾರೆ.
ಹೆಸರು ನೋಂದಾಯಿಸಲು ಸಂಪರ್ಕಿಸಿ: 7760397878/ 8073349216



