Tue. Jun 17th, 2025

Bantwal: ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಂಡದಲ್ಲಿ ಪತ್ತೆ

ಬಂಟ್ವಾಳ, (ಜೂ.17): ನಾಪತ್ತೆಯಾಗಿದ್ದ ಅಮ್ಮುಂಜೆ ಗ್ರಾಮದ ಬೆಂಜನಪದವು ನಿವಾಸಿ ಯುವಕನೋರ್ವನ ಮೃತದೇಹವು ವಿದ್ಯಾನಗರದ ಬಳಿಯ ನೀರು ತುಂಬಿದ ಹೊಂಡದಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ⭕ಮಂಗಳೂರು: ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಮಗು ಸಾವು

ಬೆಂಜನಪದವು ಕಂಬಳ ಮನೆಯ ಜನಾರ್ದನ ಪೂಜಾರಿಯವರ ಪುತ್ರ ಸಾಗರ್ (28) ಮೃತ ಯುವಕ.

ಕುಟುಂಬಸ್ಥರು ಹುಡುಕಾಡಿದರೂ ಪತ್ತೆಯಾಗದ ಕಾರಣ. ಜೂ. 16ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆಯ ವೇಳೆ, ವಿದ್ಯಾನಗರ ಹೈಸ್ಕೂಲ್ ರಸ್ತೆಯ ಹೊಂಡದಲ್ಲಿ ಸಾಗರ್ ಅವರ ಮೃತದೇಹ ಪತ್ತೆಯಾಗಿದೆ.

ಸಾಗರ್ ಅವರಿಗೆ ಅಮಲು ಪದಾರ್ಥ ಸೇವಿಸುವ ಚಟವಿತ್ತು ಎನ್ನಲಾಗಿದ್ದು, ಅಮಲಿನ ಮತ್ತಿನಲ್ಲಿ ಕಾಲುಜಾರಿ ಹೊಂಡಕ್ಕೆ ಬಿದ್ದಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು