ಸವಣೂರು:(ಜೂ.20) ವಿಶ್ವ ಓದುಗರ ದಿನದ ಪ್ರಯುಕ್ತ ವಿಶೇಷ ಸಂಗಮ ದರ್ಸ್ ಹಾಲ್ ನಲ್ಲಿ ನಡೆಯಿತು.

ಇದನ್ನೂ ಓದಿ: 🟠ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರ
ಪ್ರಸ್ತುತ ಕಾರ್ಯಕ್ರಮವನ್ನು ಬಹು।ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಉದ್ಘಾಟಿಸಿ ಓದುವುದರಿಂದ ಭಾಷಾಶುದ್ದತೆ, ಚಿಂತನೆ ಮತ್ತು ಉತ್ತಮ ಜ್ಞಾನ ಅಳವಡಿಸಲು ಸಾಧ್ಯ, ಓದುವಿಕೆ ಒಂದು ಸಮುದಾಯ ಬೆಳೆಯುವಿಕೆಗೆ ನೀಡುವ ಇಂಧನವಾಗಿದೆ ಸಮಸ್ತದ ಬಹಳಷ್ಟು ಪಂಡಿತರು ಬಹುಭಾಷೆಯುಳ್ಳವರಾದದ್ದು ಓದುವಿಕೆಯಿಂದಾಗಿದೆ ಎಂಬ ಸಂದೇಶವನ್ನು ನುಡಿದರು.

ಕಾರ್ಯಕ್ರಮದಲ್ಲಿ ದರ್ಸಿನ ಗೌರವ ಸಲಹೆಗಾರರಾದ ಬಹು। ಸಯ್ಯಿದ್ ಮುಈನ್ ತಂಙಳ್ ಸಾಲ್ಮರ ಮಾತನಾಡಿ ಇಸ್ಲಾಂ ಓದುವಿಕೆಗೆ ಬಹಳಷ್ಟು ಪ್ರಾಮುಖ್ಯತೆ ಕಲ್ಪಿಸಿದೆ ಇಸ್ಲಾಮಿನ ದೈವಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಟವಾದ ಖುರ್ಆನಿನ ಮೊದಲ ಅವತೀರ್ನವೇ ‘ನೀ ಓದು’ ಎಂದಾಗಿದೆ, ಪ್ರಸ್ತುತ ಕಾಲದಲ್ಲಿ ಓದುವಿಕೆ ಬಹಳ ವಿರಳ ಸಾಮಾಜಿಕ ಜಾಲತಾಣಗಳಲ್ಲಿ ಗುಲಾಮರಾದ ವಿದ್ಯಾರ್ಥಿ ಮತ್ತು ಯುವಸಮೂಹ ಓದುವಿಕೆಯ ದಾರಿಯನ್ನು ಪ್ರಯೋಗಿಸಿ ಜೀವನದ ಗುರಿ ಸಾರ್ಥಕಗೊಳಿಸಲು ಮುಂದೆಜ್ಜೆ ಇಡಬೇಕು. ಎಂದು ನುಡಿದರು. ನಂತರ ದರ್ಸಿನ ಹಿರಿಯ ವಿಧ್ಯಾರ್ಥಿಗಳು ಕಾರ್ಯಕ್ರಮಕ್ಕೆ ಶುಭಹಾರೈಕೆಯ ನುಡಿಗಳನ್ನು ನುಡಿದರು.


