Tue. Jun 24th, 2025

Belthangady: ಸವಣಾಲು ಅನುದಾನಿತ ಶಾಲೆಗೆ ನ್ಯಾಯವಾದಿ ಮುರಳಿ ಬಲಿಪ ಅವರಿಂದ ಉಚಿತ ಪುಸ್ತಕ ಕೊಡುಗೆ

ಬೆಳ್ತಂಗಡಿ:(ಜೂ.21) ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿನ ಹಳೆಯ ವಿದ್ಯಾರ್ಥಿ, ಬಲಿಪ ರೆಸಾರ್ಟಿನ ಮಾಲಿಕ ,ವಕೀಲರು ಮತ್ತು 2025-26 ನೇ ಸಾಲಿನ ಬೆಳ್ತಂಗಡಿ ಲಯನ್ಸ್ ಕ್ಲಬ್‌ ನ ನಿಯೋಜಿತ ಅಧ್ಯಕ್ಷರು ಆಗಿರುವ ಮುರಳಿ ಬಲಿಪ ಅವರ ವತಿಯಿಂದ ಸವಣಾಲು ಅನುದಾನಿತ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 13 ನೇ ವರ್ಷದಲ್ಲಿ ಉಚಿತ ಪುಸ್ತಕಗಳನ್ನು ವಿತರಿಸಿದರು.

ಇದನ್ನೂ ಓದಿ: ⭕ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳ ಸಾವು

ಜೂ.20 ರಂದು ಶಾಲಾ ಸಭಾಂಗಣದಲ್ಲಿ ಸಮಾರಂಭ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ದಾಮೋದರ ಬಂಗೇರ ಶಾಲಾಡಳಿತ ಸಮಿತಿಯ ಉಪಾಧ್ಯಕ್ಷರು ವಹಿಸಿದ್ದರು. ಅತಿಥಿಗಳಾಗಿ ಶಾಲಾಡಳಿತ ಸಮಿತಿಯ ಅಧ್ಯಕ್ಷ ದಯಾನಂದ ರೈ, ಕಾರ್ಯದರ್ಶಿ ಕೂಸಪ್ಪ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಭಂಡಾರಿ, ಆಡಳಿತ ಸಮಿತಿಯ ಪದಾಧಿಕಾರಿ ವಿವೇಕ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸೇವಾಕರ್ತರಾದ ಮುರಳಿ ಬಲಿಪ ಇವರ ಪುತ್ರರಾದ ಮಯೂರ ಬಲಿಪ ಮತ್ತು ಮಂದಾರ ಬಲಿಪ,

ತಾಯಂದಿರ ಸಮಿತಿಯ ಅಧ್ಯಕ್ಷೆ ಪ್ರೇಮಾ, ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಜಿ, ಶಾಲಾ ಶಿಕ್ಷಕಿಯರಾದ ಮಮತಾ, ಸೌಮ್ಯಾ, ಕು|ಶುಭ, ಕು| ಸುಷ್ಮಾ, ಕು| ವೈಶಾಲಿ, ಶಾಲಾ ವಿದ್ಯಾರ್ಥಿ ನಾಯಕ ಧನ್ ರಾಜ್ ಹೆಗ್ಡೆ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯೋಪಾಧ್ಯಾಯರು ಸ್ವಾಗತಿಸಿದರು, ಸೌಮ್ಯಾ ಧನ್ಯವಾದ ಸಮರ್ಪಿಸಿದರು. ಕು| ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *