Tue. Jun 24th, 2025

Sakleshpur: ರಾಜ್ಯ ಸರ್ಕಾರದಿಂದ ಮುಸ್ಲಿಂ ತುಷ್ಟೀಕರಣದ ಪರಮಾವಧಿ ಒಕ್ಕಲಿಗರಲ್ಲಿ ಬಡವರು ಇಲ್ಲವೇ ಕಾಂಗ್ರೆಸ್ ಪಕ್ಷ ಹಿಂದೂಗಳ ಮತ ಬೇಡ ರಾಜ್ಯ ಡಿಸಿಎಂ ಡಿ.ಕೆ ಶಿವಕುಮಾರ್’ಗೆ ರಘು ಸಕಲೇಶಪುರ ಸವಾಲ್

ಸಕಲೇಶಪುರ: ಧರ್ಮದ ಹಾಗೂ ಮತದ ಆಧಾರದ ಮೇಲೆ ಯಾವುದೇ ಮೀಸಲಾತಿ ನೀಡಬಾರದು ಎಂಬುದನ್ನು ಸಂವಿಂಧಾನದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಅವರು ಉಲ್ಲೇಖ ಮಾಡಿರುವುದನ್ನು ತಿರಸ್ಕಾರ ಮಾಡಿ ಮುಸ್ಲಿಂ ಓಲೈಕೆ ಮಾಡಲು ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 15% ಮೀಸಲಾತಿ ನೀಡಿರುವುದು ಸಂವಿಂಧಾನ ವಿರೋಧಿ ಯೋಜನೆಯನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದಕ್ಕೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಸಕಲೇಶಪುರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಮಾಡಿದ್ದಾರೆ.

ದಿನಾಂಕ – 19/06/2025 ರಂದು ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದಲ್ಲಿ ರಾಜ್ಯ ಸರ್ಕಾರದ ವಸತಿ ಯೋಜನೆಯ ಹಂಚಿಕೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಇದ್ದ 10% ಮೀಸಲಾತಿಯನ್ನು 15% ಕ್ಕೆ ಏರಿಕೆ ಮಾಡಿರೋದು ಸಂವಿಂಧಾನ ವಿರೋಧಿಯಾಗಿದ್ದು ಈ ಅಸಂವಿಂಧಾನಿಕ ನಿರ್ಣಯವನ್ನು ತಡೆ ಹಿಡಿಯಬೇಕು ಈ ಮೀಸಲಾತಿ ನಿರ್ಣಯದಿಂದ ದಲಿತರು ಬಡವರು ಹಿಂದುಳಿದವರಿಗೆ ಅನ್ಯಾಯವಾಗುವುದರಿಂದ 15% ಮೀಸಲಾತಿಯನ್ನು ರದ್ದು ಮಾಡಿ ರಾಜ್ಯಪಾಲರು ಒಪ್ಪಿಗೆ ನೀಡಬಾರದು ಎಂದು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಎಲ್ಲಾ ಜಾತಿಯಲ್ಲು ಬಡವರು ಇದ್ದು ಕೂಲಿ ಮಾಡುತ್ತಿರುವ ಅತಿ ಕಡು ಬಡವರು ಇದ್ದು ಇಂದು ಸಹ ಗುಡಿಸಲಿನಲ್ಲಿ ವಾಸ ಮಾಡುತ್ತಿರೋದು ನಮ್ಮ ಕಣ್ಣು ಮುಂದೆ ಇದ್ದು ಇದನ್ನು ನೋಡದೆ ಓಲೈಕೆ ರಾಜಕಾರಣ ಮಾಡುತ್ತಿರುವ ಸರ್ಕಾರ ಮುಸ್ಲಿಂ ತುಷ್ಟಿಕರಣ ಮಾಡುತ್ತಿದೆ ಕಾಂಗ್ರೆಸ್ ಸರಕಾರ ಎಂದು ದೂರಿದ್ದಾರೆ.
ದಲಿತರು ಬಡವರು ಹಿಂದುಳಿದವರು ಇನ್ನು 50%ದಷ್ಟು ಜನ ಇವತ್ತಿಗೂ ಸ್ವಂತ ಸೂರು ಇಲ್ಲದೆ ಒದ್ದಾಡುತ್ತಿರುವಾಗ ಅಕ್ರಮವಾಗಿ ಒಂದು ಮತದ ಸಮುದಾಯದ ಓಲೈಕೆಗೆ ಮುಸ್ಲಿಮರನ್ನು ತುಷ್ಟಿಕರಣ ಮಾಡಬೇಕು ಎಂಬ ದುರುದ್ದೇಶದಿಂದ ಮುಸ್ಲಿಮರಿಗೆ 15% ವಸತಿ ಯೋಜನೆಯಲ್ಲಿ ನೀಡುತ್ತಿರೋದು ಬಡವರಿಗೆ ಅನ್ಯಾಯವಾಗುತ್ತದೆ.

  • ಈ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ 15% ಹೆಚ್ವ್ಹಾಳ ಮಾಡಿ ವಸತಿ ಹಂಚಲು ಪ್ರಾರಂಭಿಸಿದರೆ ಬಡವರಿಗೆ ದಲಿತರಿಗೆ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕದೆ ತಿರಸ್ಕರಿಸಿ ಬಡವರಿಗೆ ಅನ್ಯಾಯ ಆಗುವುದನ್ನ ತಡಿಯಬೇಕು ಎಂದು ಪ್ತತಿಭಟನೆಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.
  • ಇದೆ ತುಷ್ಟಿಕರಣ ಮುಂದುವರೆದಲ್ಲಿ ರಾಜಾದ್ಯಂತ ಹಿಂದೂಗಳ ಜಾಗೃತಿ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಕಬ್ಬಿನಗದ್ದೆ ಮಂಜುನಾಥ್, ಸಂಚಾಲಕ ಶಿವು ಜಿಪ್ಪಿ, ಹಾನುಬಾಳು ಸಂಚಾಲಕ ಹೆಬ್ಬಸಾಲೆ ರವಿ, ಬಿಜೆಪಿ ಮುಖಂಡರಾದ ದುಷ್ಯಂತ್ ಗೌಡ, ಹರೀಶ್ ಗೌಡ ಆಟೋ ಲೋಕೇಶ್, ಸುಪ್ರೀತ್, ಸಂತೋಷ್, ದಿಲೀಪ್ ಕೆರೋಡಿ ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *