ಉಡುಪಿ :(ಜೂ.22) ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಕನ್ನಡ ತರಬೇತಿ ಕಾರ್ಯಗಾರ ವರ್ಧನ-25 ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಕಿನಜೆಡ್ಡು ಆಶ್ರಯದಲ್ಲಿ ಜರುಗಿತು.

ವಿದ್ಯಾಭಾರತಿ ಕರ್ನಾಟಕ ತರಬೇತಿ ಕಾರ್ಯಗಾರವನ್ನು ಒಂದು ಬೆಳವಣಿಗೆಯ ಪಥವೆಂದು ನಂಬಿದ್ದು, ಅದು ಶಿಕ್ಷಕರ ಬೆಳವಣಿಗೆಯ ಪಥವಾಗಿದೆ. ಶಿಕ್ಷಕರು ಪ್ರಸ್ತುತ ವಿದ್ಯಮಾನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕಾಗಿದೆ.
ಜೂನ್ 21 ವಿಶ್ವ ಯೋಗ ದಿನದ ಸಂಭ್ರಮದ ಸಂದರ್ಭದಲ್ಲಿ ನಾವಿದ್ದೇವೆ. ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವರ್ಧನ – 2025 ಕಾರ್ಯಾಗಾರವನ್ನು ಉದ್ದೇಶಿಸಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಮಾನವ ಭೋಗಿಯಾದರೆ ಸಾಲದು ಯೋಗಿಯಾಗಿ ಉಪಯೋಗಿಯಾಗಬೇಕು ಎಂದು ನುಡಿದರು.
ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಶೈಕ್ಷಣಿಕ ಚಟುವಟಿಗಳಿಗೆ ಸಂಪೂರ್ಣ ಸಹಕಾರ ನಿರಂತರವಾಗಿ ಲಭಿಸಲಿದೆ, ಹಾಗೂ ಇಂದಿನ ತರಬೇತಿ ಯಶಸ್ವಿಯಾಗಿ ಸಾಗಲಿ ಎಂದು ಸಂಸ್ಥೆಯ ಕಾರ್ಯದರ್ಶಿ ಅಶೋಕ ಸಾಮಂತ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರಪ್ಪ, ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಶ್ರೀ ರಾಜೇಶ್ ಪಾಟೀಲ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಸೀತಾರಾಮ್ ಕುಲಾಲ್ , ಉಪಸ್ಥಿತರಿದ್ದರು.

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಸರಕಾರಿ ಪ್ರೌಢಶಾಲೆ, ಹಾಲಾಡಿ ಕನ್ನಡ ಶಿಕ್ಷಕರಾದ ಶ್ರೀ ಹರಿಶ್ಚಂದ್ರ ಕೋಟೇಶ್ವರ ಕನ್ನಡ ತರಬೇತಿಯನ್ನು ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀರಾಧಾಕೃಷ್ಣ ಸಾಮಂತ್ ಅಧ್ಯಕ್ಷತೆಯನ್ನು ವಹಿಸಿದರು.
ಸಂಪನ್ಮೂಲ ವ್ಯಕ್ತಿ ಶ್ರೀಯುತ ಹರಿಶ್ಚಂದ್ರ ಕೋಟೇಶ್ವರ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 13 ಸಂಸ್ಥೆಗಳ 34 ಕನ್ನಡ ಶಿಕ್ಷಕರು ಭಾಗವಹಿಸಿದರು. ಶ್ರೀಮತಿ ಮುಕ್ತಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು, ಮಹೇಶ್ ಹೈಕಾಡಿ, ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪ್ರಾಸ್ತಾವಿಕ ನುಡಿಯನ್ನಾಡಿದರು. ಸ್ವಾಗತವನ್ನು ರಮ್ಯ ಮಾತಾಜಿ ನಿರ್ವಹಿಸಿದರು. ನವೀನ ಗುರೂಜಿ, ಶಾರದಾ, ನಯನ, ದಿವ್ಯ ಮಾತಾಜಿಯವರು ಸಹಕರಿಸಿದರು.


