Mon. Jun 23rd, 2025

Belthangady: ಬೆಳ್ತಂಗಡಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘ

ಬೆಳ್ತಂಗಡಿ:(ಜೂ.23) ಬೆಳ್ತಂಗಡಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾಗಿರುವ ಶ್ರೀಯುತ ಕೃಷ್ಣಾನಂದ ರಾವ್ ಇವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಇದನ್ನೂ ಓದಿ: 🟣ಉಜಿರೆ : ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

ಅದೇ ರೀತಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸ. ಉ. ಪ್ರಾ. ಶಾಲೆ ಬದನಾಜೆಯ ಶ್ರೀಯುತ ನಿರಂಜನ್ ,ಕೋಶಾಧಿಕಾರಿಯಾಗಿ ಶ್ರೀಯುತ ಅಶೋಕ್, ಸರಕಾರಿ ಪ್ರೌಢಶಾಲೆ ಹಳೇಪೇಟೆ ಉಜಿರೆ ಇವರು ಆಯ್ಕೆಯಾಗಿರುತ್ತಾರೆ . ಸಂಘದ ಗೌರವ ಅಧ್ಯಕ್ಷರಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಇವರು ಆಯ್ಕೆ ಆಗಿರುತ್ತಾರೆ. ಸಂಘದ ಉಪಾಧ್ಯಕ್ಷರಾಗಿ ಶ್ರೀಯುತ ವೆಂಕಟೇಶ್ ಭಟ್ ಗುರುವಾಯನಕೆರೆ ಹಾಗೂ ಕೇವನ್ ಅಳದಂಗಡಿ ,

ಜಂಟಿ ಕಾರ್ಯದರ್ಶಿಯಾಗಿ ಶ್ರೀ ಶೀನಪ್ಪ ಗೌಡ ಪುದುವೆಟ್ಟು ಹಾಗೂ ಶ್ರೀ ಪ್ರವೀಣ್ ಎನ್ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಅಜಿತ್ ಗೇರುಕಟ್ಟೆ ಹಾಗೂ ಶೇಖರ್ ಅಳದಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಗುಣಪಾಲ್ ಎಂ ಎಸ್ ಮುಂಡಾಜೆ ಹಾಗೂ ಶ್ರೀಮತಿ ಪದ್ಮಶ್ರೀ ಜೈನ್ ಕಾಶಿಪಟ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ತ್ರಿಶಲಾ ಜೈನ್ ಕರ್ನೂಡಿ ಲಾಯಿಲ, ಪತ್ರಿಕಾ ಕಾರ್ಯದರ್ಶಿಯಾಗಿ ಶ್ರೀ ಅಜಿತ್ ಕುಮಾರ್ ಲಾಯಿಲ, ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀ ವಿಠಲ್ ನಾಯಕ್ ಬದನಾಜೆ ಇವರು ಆಯ್ಕೆ ಆಗಿರುತ್ತಾರೆ.

Leave a Reply

Your email address will not be published. Required fields are marked *