ಪಟ್ರಮೆ: (ಜೂ.23) ಬಿಜೆಪಿ ಕಾರ್ಯಕರ್ತ ಜಯರಾಮ್ ರವರ ಮನೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸವನ್ನು ಪುಷ್ಪನಮನದ ಮೂಲಕ ನಡೆಸಿ ಅಲ್ಲಿಂದ ಮೆರವಣಿಗೆ ಮೂಲಕ ಗ್ರಾಮ ಪಂಚಾಯತ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: 🟢ಮಚ್ಚಿನ : ಮಚ್ಚಿನ ಗ್ರಾಮದ ಪಾಲಡ್ಕದ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣಾ ಕಾರ್ಯಕ್ರಮ
ಪ್ರಮುಖ ಭಾಷಣಕಾರರಾಗಿ ಸಂದೀಪ್ ರೈ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಪಂಚಾಯತ್ ಮಟ್ಟದಲ್ಲಿ ಈಗಿನ ಸರಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಳೆ ಎಳೆ ಯಾಗಿ ವಿವರಿಸಿದರು.
9/11 ಸಮಸ್ಯೆ, ಅಕ್ರಮ ಸಕ್ರಮ ಸಮಸ್ಯೆ, ವಿದ್ಯುತ್ ದರ ಸಮಸ್ಯೆ, ವಸತಿ ಸಮಸ್ಯೆ, ಕೆಂಪು ಕಲ್ಲು ನಿಷೇಧ, ಬಿಪಿಎಲ್ ಕಾರ್ಡು ರದ್ಧತಿ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಮುಂತಾದ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಯಿತು. ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷ ಮನೋಜ್, ಹಾಗೂ ಸದಸ್ಯರು, ಶಕ್ತಿಕೇಂದ್ರ ಪ್ರಮುಖ್ ಡಾಗಯ್ಯ ಗೌಡ, ಸೊಸೈಟಿ ನಿರ್ದೇಶಕರುಗಳು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


