Thu. Jun 26th, 2025

Kundapur: ಮನೆಗೆ ಮರಳಿ ಬಂದ ನಾಪತ್ತೆಯಾಗಿದ್ದ ಮಹಿಳೆ – ನಾಪತ್ತೆಯಾಗಲು ಕಾರಣ ಬಿಚ್ಚಿಟ್ಟ ಮಹಿಳೆ

ಕುಂದಾಪುರ :(ಜೂ.26) ಜೂ. 10 ರಂದು ಕೋಡಿ ಸೇತುವೆಯಲ್ಲಿ ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಬರೆದಿಟ್ಟು
ನಾಪತ್ತೆಯಾಗಿದ್ದ ವಿಠಲವಾಡಿ ನಿವಾಸಿ ಹೀನಾ ಕೌಸರ್ (32) ಮರಳಿ ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: ⭕ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲೇ ನಿವೃತ್ತ ಉದ್ಯೋಗಿ ಆತ್ಮಹ*ತ್ಯೆ

ಹೀನಾ ಕೌಸರ್ ಕೋಡಿ ಸೇತುವೆಯಲ್ಲಿ ಅವರ ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಪತ್ತೆಯಾದ ಬೆನ್ನಲ್ಲೇ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಮನೆಗೆ ವಾಪಾಸ್ ಆಗಿದ್ದು ಪೊಲೀಸ್ ವಿಚಾರಣೆ ವೇಳೆ ಅಬಿದಾ ಎಂಬಾಕೆಯ ಟಾಚ್‌ರ್ರನಿಂದ ಡಿಪ್ರೆಶನ್‌ಗೆ ಒಳಗಾಗಿದೆ. ಹಾಗಾಗಿ ಆತ್ಮಹತ್ಯೆ ಮಾಡಲು ಬೆಳ್ಳಂಬೆಳ್ಳಗ್ಗೆ ಕೋಡಿ ಸೇತುವೆ ಬಳಿ ಹೋದೆ.

ಅಲ್ಲಿ ನದಿಗೆ ಜಿಗಿಯಲು ಹೊರಟಾಗ ಮೀನುಗಾರರಿದ್ದ ಕಾರಣ ಮನಸ್ಸು ಬದಲಿಸಿ ಮಂಗಳೂರಿಗೆ ಹೋದೆ. ಅಲ್ಲಿಂದ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದಿದ್ದಾರೆ.


ಇತ್ತ ಹೀನಾ ನಾಪತ್ತೆ ಬೆನ್ನಲ್ಲೇ ಸಾಹಿಲ್ ಎಂಬಾತ ಕಾಣೆಯಾಗಿದ್ದ ಏನಾದರೂ ಲಿಂಕ್ ಇದೆಯಾ ಎಂಬ ಪ್ರಶ್ನೆಗೆ, ನನಗೂ ಅದಕ್ಕೂ ಸಂಬಂಧವಿಲ್ಲ. ಅವನೆಲ್ಲಿದ್ದಾನೆ ಅಂತಾ ನಂಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಹೆಮ್ಮಾಡಿಯ ಸಾಹಿಲ್ ಕೂಡ ಮನೆಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *