ಬೆಳ್ತಂಗಡಿ:(ಜೂ.28) ರೋಟರಿಯ ನೂತನ ಪದಾಧಿಕಾರಿಗಳ ಪದಗ್ರಹಣದ ಪತ್ರಿಕಾಗೋಷ್ಠಿಯು ಜೂ.28 ರಂದು ರೋಟರಿ ಭವನದಲ್ಲಿ ನಡೆಯಿತು.

ಇದನ್ನೂ ಓದಿ: ⭕Manjeshwara: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ
ಸಮಾಜಸೇವಾ ಉದ್ದೇಶದಿಂದ ಸ್ಥಾಪಿತವಾದ ರೋಟರಿ ಸಂಘಟನೆಗೆ ಶತಮಾನದ ಇತಿಹಾಸ ಇದೆ. ರೋಟರಿಯು ಇಂದು ಜಾಗತಿಕವಾಗಿ ಸುಮಾರು 200 ದೇಶಗಳಲ್ಲಿ 35,000 ಕ್ಲಬ್ ಗಳಲ್ಲಿ. ವಿವಿಧವೃತ್ತಿಗಳಲ್ಲಿ ತೊಡಗಿರುವ ಸದಸ್ಯರ ಮೂಲಕ, ಮನುಕುಲದ ಸೇವೆಯಲ್ಲಿ, ತೊಡಗಿಸಿಕೊಂಡಿದೆ. ಸಾರ್ಥಕ ಸೇವೆಯ 54, ವರ್ಷಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ಮಂಗಳೂರು ಉತ್ತರ ಬೆಳ್ತಂಗಡಿ ಖ್ಯಾತ ನ್ಯಾಯವಾದಿ ಹಾಗೂ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲರಾದ ಪ್ರೊ. ಎ. ಎನ್.ಜೆ. ಕಡಂಬರು ಸ್ಥಾಪಕ, ಸುಧೀರ್ ಜಿ.ಭಿಡೆಯವರು ಸ್ಥಾಪಕ ಕಾರ್ಯದರ್ಶಿಯಾಗಿ ಇದರ ಜವಾಬ್ದಾರಿಯನ್ನು ಆಗ ಯಶಸ್ವಿಯಾಗಿ ನಿರ್ವಹಿಸಿದರು.
ಬೆಳ್ತಂಗಡಿ ರೋಟರಿ ಸಂಸ್ಥೆ ಕಳೆದ 54 ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರರವರು ಸಂಸ್ಥೆಯ ಗೌರವ ಸದಸ್ಯರಾಗಿರುವ ನಮ್ಮ ಈ ಸಂಸ್ಥೆಯು ತಾಲೂಕಿನಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ 71 ಸಾಧಕರನ್ನು ಸದಸ್ಯರನ್ನಾಗಿ ಹೊಂದಿದೆ. ನಮ್ಮೊಂದಿಗೆ ರೋಟರಿ ಸಹ ಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು, 8 ಇಂಟರಾಕ್ಟ್ ಕ್ಲಬ್ ಗಳು ಹಾಗೂ ಆನ್ಸ್ ಕ್ಲಬ್ ಸದಸ್ಯರು, ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದಾರೆ.
ಕಳೆದ ಸಾಲಿನಲ್ಲಿ ಕ್ಲಬ್ಬಿನ ಸಾರಥ್ಯವನ್ನು ವಹಿಸಿದ ರೊ.ಪೂರನ್ ವರ್ಮ, ಸಂದೇಶ್ ರಾವ್ ಹಾಗೂ ಅವರ ತಂಡ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಂಡು ಇತ್ತೀಚೆಗೆ ಜಿಲ್ಲಾ ಸಮ್ಮೇಳನದಲ್ಲಿ ಅತಿ ಹೆಚ್ಚು ಅವಾರ್ಡ್ ಪಡೆದುದು ಮಾತ್ರವಲ್ಲ. ಜಿಲ್ಲೆಯ ದೊಡ್ಡ ಕ್ಲಬ್ ಗಳಿಗೆ ನೀಡುವ ಅತೀ ದೊಡ್ಡ ಗೌರವವಾದ ಡೈಮಂಡ್ ಪ್ಲಸ್ ಅವಾರ್ಡ್ ನೊಂದಿಗೆ ಪುರಸ್ಕೃತ ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇದೀಗ ಬೆಳ್ತಂಗಡಿ ರೋಟರಿ ಕ್ಲಬ್ ನ 55 ನೇ ವರ್ಷದ ಅಧ್ಯಕ್ಷರಾಗಿ ಪ್ರೊ.ಪ್ರಕಾಶ ಪ್ರಭು, ಕಾರ್ಯದರ್ಶಿಯಾಗಿ ಡಾ. ಎಮ್ ಎಮ್ ದಯಾಕರ್ ಖಜಾಂಜಿಯಾಗಿ ನಾರಾಯಣ ಪೈ, ದಂಡಪಾಣಿಯಾಗಿ ವಿವೇಕ ಸಂಪದ ಅರಿಗ, ನಿರ್ದೇಶಕರಾಗಿ ಪೂರನ್ ವರ್ಮ, ತ್ರಿವಿಕ್ರಮ ಹೆಬ್ಬಾರ, ಮನೋರಮ ಭಟ್, ಪ್ರವೀಣ ಗೋಖಲೆ, ಸಂದೇಶ್ ರಾವ್ ಹಾಗೂ ಪಲ್ಸ್ ಪೊಲಿಯೊ ಚ್ಯಾರ್ ಮ್ಯಾನ್ ಆಗಿ, ಡಾ.ಶಶಿಧರ ಡೋಂಗ್ರೆ, ಪ್ರಾಜೆಕ್ಟ್ ಮತ್ತು ಸ್ಕಾಲರ್ ಶಿಪ್ ಚೆಯರ್ ಮ್ಯಾನ್ ಆಗಿ ಅಬೂಬಕ್ಕರ್ ಕಲ್ಚರಲ್ ಚೆಯರ್ ಮ್ಯಾನ್ ಆಗಿ ಡಾ.ಸುವೀರ್ ಜೈನ್, ಪಬ್ಲಿಕ್ ಇಮೇಜ್ ಚೆಯರ್ ಮ್ಯಾನ್ ಆಗಿ ಬಿಕೆ ಧನಂಜಯ್ ರಾವ್, ಬ್ಲಡ್ ಬ್ಯಾಂಕ್ ಚೆಯರ್ ಮ್ಯಾನ್ ಆಗಿ ಶ್ರೀಧರ ಕೆ.ವಿ., ಸ್ಪೋರ್ಟ್ಸ್ ಚೆಯರ್ ಮ್ಯಾನ್ ಆಗಿ ಆದರ್ಶ ಕಾರಂತ. ನಿಯತಕಾಲಿಕ ಪತ್ರಿಕೆ “ರೋಟರ್” ಇದರ ಚೆಯರ್ ಮ್ಯಾನ್ ಆಗಿ ಕಿರಣ್ ಹೆಬ್ಬಾರ್ ಹಾಗೂ ಇಂಟರಾಕ್ಟ್ ರೋಟಾರಾಕ್ಟ್ ಆರ್ ಸಿ.ಸಿ. ಇದರ ಚೆಯರ್ ಮ್ಯಾನ್ ಆಗಿ ನಾರಾಯಣ ಭಿಡೆ, ಟಿ.ಆರ್.ಎಫ್. ಚೆಯರ್ ಮ್ಯಾನ್ ಆಗಿ ಶ್ರೀನಾಥ್ ಕೆ.ಎಂ.ಇವರು ಜುಲೈ.೩ ರಂದು ನಡೆಯುವ ಪದಗ್ರಹಣ ಸಮಾರಂಭದಲ್ಲಿ ಪದಾಧಿಕಾರಿ 2026-27 ರ ಜಿಲ್ಲಾ ಗವರ್ನರ್ ರೊ. ಎಂ ಪಿ ಎಚ್ ಎಫ್ ಸತೀಶ್ ಬೋಳಾರ್ ಇವರಿಂದ ಅಸಿಸ್ಟೆಂಟ್ ಗವರ್ನರ್ ರೊ. ಪಿ ಎಚ್ ಎಫ್ ಡಾ ಎ ಜಯಕುಮಾರ್ ಶೆಟ್ಟಿ, ವಲಯಾಧಿಕಾರಿ ರೊ.ಎಂ ಪಿ ಎಚ್ ಎಸ್ ಸುರೇಶ್ ಸಾಲ್ಯಾನ್ ಇವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷದ ಚಟುವಟಿಕೆಗಳು, ನೂತನ ಪದಾಧಿಕಾರಿಗಳ ಪದಗ್ರಹಣದೊಂದಿಗೆ ಆರಂಭವಾಗಲಿದೆ. ಉಜಿರೆಯ ಶ್ರೀ ಕೃಷ್ಣಾನುಗ್ರಹ ಕಲಾಭವನದಲ್ಲಿ ದಿ.03-07- 2025 ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ರೊ.ಪೂರನ್ ವರ್ಮ, ಸಂದೇಶ್ ರಾವ್, ಪ್ರೊ.ಪ್ರಕಾಶ ಪ್ರಭು, ಉಪಸ್ಥಿತರಿದ್ದರು.



