ಮಂಜೇಶ್ವರ:(ಜೂ.೨೮) ವರ್ಕಾಡಿ ಕಲ್ಲೆಂಗಿಯ ದಿ.ಲೂಯಿಸ್ ಮೊಂತೆರೋ ಅವರ ಪತ್ನಿ ಹಿಲ್ಡಾ ಮೊಂತೆರೋ (60) ಅವರನ್ನು ಅವರ ಸ್ವಂತ ಮಗನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ

ಇದನ್ನೂ ಓದಿ: 🔴ಬೆಳ್ತಂಗಡಿ: ಜು.1 ರಂದು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಆರೋಪಿ ಮೆಲ್ವಿನ್ ಮೊಂತೆರೋ (33) ನನ್ನ ಮಂಜೇಶ್ವರ ಪೊಲೀಸರು ತನಿಖೆ ಮಾಡುತ್ತಿದ್ದು, ಆರ್ಥಿಕ ಸಂದಿಗ್ಧತೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗೆ ಕೆಲಸವಿಲ್ಲದಿರುವುದು ಹಾಗಾಗಿ ತನ್ನ ತಾಯಿಯಿಂದ ಜಮೀನು ಅಡವಿರಿಸಿ 1 ಲಕ್ಷ ರೂ. ಸಾಲ ಪಡೆದು ನೀಡಲು ತಾಯಿಗೆ ಹೇಳಿದ್ದು, ಅದಕ್ಕೆ ಒಪ್ಪದಿರುವುದೇ ಕೊಲೆಗೆ ಕಾರಣ ಎಂದು ಆರೋಪಿ ತಿಳಿಸಿರುವುದಾಗಿ ವರದಿಯಾಗಿದೆ.



