Sun. Jul 20th, 2025

ಬೆಂಗಳೂರು: ಪ್ರೀತಿಸುವಂತೆ ಮಹಿಳೆಗೆ ಕಿರುಕುಳ – ಮಾತುಕತೆಗೆ ಕರೆದವರಿಗೆ ಆತ ಮಾಡಿದ್ದೇನು ಗೊತ್ತಾ..?

ಇದನ್ನೂ ಓದಿ: ⭕ಶಿಕ್ಷಕರ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು (ಜು.20): ಮಾತುಕತೆಗೆಂದು ಬಂದವನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಹೆಚ್ಎಎಲ್​ನಲ್ಲಿ ನಡೆದಿದೆ. ಜುಲೈ 17ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೆಲ್ವ ಕಾರ್ತಿಕ್ ಕೊಲೆ ಮಾಡಲು ಯತ್ನಿಸಿದ ಆರೋಪಿ. ತಮಿಳುನಾಡು ಮೂಲದ ಆರೋಪಿ ಸೆಲ್ವ ಕಾರ್ತಿಕ್​ಗೆ ಕರ್ನಾಟಕದ ಓರ್ವ ವಿವಾಹಿತ ಮಹಿಳೆ ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಳೆ. ಆರೋಪಿ ಸೆಲ್ವ ಕಾರ್ತಿಕ್​ ಇನ್​ಸ್ಟಾಗ್ರಾಂನಲ್ಲೇ ಮಹಿಳೆಗೆ ಮೆಸೇಜ್ ಮಾಡಿ ಪ್ರೀತಿಸು ಅಂತ ಪೀಡಿಸುತ್ತಿದ್ದನು.


ಈ ವಿಚಾರವನ್ನು ಮಹಿಳೆ ಗಂಡನಿಗೆ ಹೇಳದೆ ತನ್ನ ತಂದೆಗೆ ತಿಳಿಸಿದ್ದಾಳೆ. ಆಗ, ಮಹಿಳೆಯ ತಂದೆ ಮಾತುಕತೆಗೆಂದು ಹೆಚ್​ಎಎಲ್​ಗೆ ಕಾರ್ತಿಕ್​ನನ್ನು ಕರೆಸಿಕೊಂಡಿದ್ದಾರೆ. ಹೆಚ್​ಎಲ್​ಗೆ ಬಂದ್ ಕಾರ್ತಿಕ್​ನನ್ನು ಮಹಿಳೆಯ ತಮ್ಮ ಪ್ರಶಾಂತ್​ನು ತನ್ನ ಬೈಕ್​ನಲ್ಲಿ ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದನು. ಈ ವೇಳೆ, ಆರೋಪಿ ಕಾರ್ತಿಕ್​ನು ಹಿಂದಿನಿಂದ ಪ್ರಶಾಂತ್​ನ ಕತ್ತುಕೊಯ್ದ ಕೊಲೆ ಮಾಡಲು ಯತ್ನಿಸಿದ್ದಾನೆ. ಗಾಯಾಳು ಪ್ರಶಾಂತ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೆಲ್ವ ಕಾರ್ತಿಕ್​ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *