Sat. Jul 26th, 2025

Subrahmanya: ನಾಪತ್ತೆಯಾಗಿದ್ದ ಅಂಬ್ಯುಲೆನ್ಸ್ ಚಾಲಕ ಕುಮಾರಧಾರಾ ನದಿಯಲ್ಲಿ ಶವವಾಗಿ ಪತ್ತೆ

ಸುಬ್ರಹ್ಮಣ್ಯ:(ಜು.25) ಕೊನೆಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಕೆ. ಹೊನ್ನಪ್ಪ ಗೌಡ (52) ಅವರ ಮೃತದೇಹವು ಇಂದು (ಜುಲೈ 25) ಕುಮಾರಧಾರ ನದಿಯಿಂದ ಸುಮಾರು 2 ಕಿಮೀ ದೂರ ನದಿಯ ಬದಿಯಲ್ಲಿ ಗಿಡಗಳ ಮಧ್ಯೆ ಪತ್ತೆಯಾಗಿದೆ.

ಇದನ್ನೂ ಓದಿ: ⭕ಧರ್ಮಸ್ಥಳ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಿಂದ ಮಂಜುನಾಥ ಸ್ವಾಮಿಗೆ ಉರುಳು ಸೇವೆ

ಶೋಧ ಕಾರ್ಯಕ್ಕೆ ಸಹಾಯವಾಗಿ SDRF (State Disaster Response Force) ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ, ಸಮಾಜಸೇವಕ ರವಿಕಕ್ಕೆಪದವು ಹಾಗೂ ಗ್ರಾಮಸ್ಥರು ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಕಳೆದ 48 ಗಂಟೆಗಳ ಕಾಲ ನಿರಂತರ ಶ್ರಮವಹಿಸಿ, ಕೊನೆಗೂ ದೇಹವನ್ನು ನದಿಯ ತೀರದಲ್ಲಿ ಪತ್ತೆಹಚ್ಚಿದ್ದಾರೆ.

ಈ ಘಟನೆ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

Leave a Reply

Your email address will not be published. Required fields are marked *