Tue. Aug 5th, 2025

ಉಜಿರೆ: ಹಿರಿಯ ಯಕ್ಷಗಾನ ಕಲಾವಿದ ಎಸ್. ಬಿ ನರೇಂದ್ರ ಕುಮಾರ್ ನಿಧನ

ಉಜಿರೆ:(ಆ.5) ಹಿರಿಯ ಯಕ್ಷಗಾನ ಕಲಾವಿದರು, ನಿವೃತ್ತ ದೈಹಿಕ ಶಿಕ್ಷಕರಾಗಿ ಹಲವಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹಕರಾಗಿದ್ದ ಧರ್ಮಸ್ಥಳ ಚಿಕ್ಕಮೇಳದ ಮೇಲುಸ್ತುವಾರಿಗಳಾಗಿದ್ದ ಎಸ್. ಬಿ. ನರೇಂದ್ರ ಕುಮಾರ್ (83ವ) ಆ.4ರಂದು ವಿಧಿವಶರಾಗಿದ್ದಾರೆ.

ಇದನ್ನೂ ಓದಿ: 🔴ಉಜಿರೆ: ಅನುಗ್ರಹದಲ್ಲಿ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆ

ಅಸೌಖ್ಯದ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇವರು ಮಕ್ಕಳಾದ ಯಕ್ಷಗಾನ ಕಲಾವಿದ, ಪ್ರಾದ್ಯಾಪಕ ಶೃತ ಕೀರ್ತಿರಾಜ, ಉದ್ಯಮಿ ಸಿದ್ಧಾಂತ ಕೀರ್ತಿರಾಜ, ಮತ್ತು ಮಗಳು ಸುಪ್ರಿತಾ ರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *